ಯಲ್ಲಿದ್ದು, 2017-18ರ ಸಾಲಿನ ಬಜೆಟ್ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗಾಗಿ 3,174 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ರೈಲ್ವೆಯ ಹಿರಿಯ ಅಧಿಕಾರಿಗಳಾದ ರಾಜೇಶ್ ಅಗರ್ವಾಲ್, ಪಿ.ಪಿ.ಆವಸ್ಥಿ, ಮೋಹಿತ್ ಲೀಲಾ, ವೇದ ಪ್ರಕಾಶ್, ಅನಿಲ್ ಸಕ್ಸೆನಾ ಈ ಕುರಿತು ಮಾಹಿತಿ ನೀಡಿದರು.
Advertisement
ರಾಜ್ಯದಲ್ಲಿನ ರೈಲ್ವೆ ಯೋಜನೆಗಳ ಕಾಮಗಾರಿಗಳನ್ನು 3-4 ವರ್ಷದೊಳಗೆ ಮುಕ್ತಾಯಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಗರಿಷ್ಠ 6 ವರ್ಷದೊಳಗೆ ಯೋಜನೆ ಮುಗಿಯಲೇಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ. ಮೈಸೂರು-ಬೆಂಗಳೂರು ಡಬ್ಲಿಂಗ್ ಕಾಮಗಾರಿ 2017-18ರೊಳಗೆ ಮುಕ್ತಾಯಗೊಳ್ಳಲಿದೆ ಎಂದರು. ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಯೋಜನೆಗಳನ್ನು ಜಾರಿಗೊಳಿ ಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕರ್ನಾಟಕ 2000ರಲ್ಲಿಯೇ ಕೆ-ರೈಡ್ (ಕರ್ನಾಟಕ ರೈಲ್ವೆ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ) ಮೂಲಕ ಜಂಟಿ ಯೋಜನೆಗಳನ್ನು ಪ್ರಾರಂಭಿಸಿತ್ತು. ಯೋಜನೆಗಳ ವೆಚ್ಚದಲ್ಲಿ ಶೇ.26 ರಾಜ್ಯ ಮತ್ತು ಶೇ.26 ರಷ್ಟನ್ನು ಐಡಿಎಫ್ಸಿ ಭರಿಸಿದರೆ, ಶೇ.48ರಷ್ಟನ್ನು ರೈಲ್ವೆ ಇಲಾಖೆಭರಿಸುತ್ತಿತ್ತು. ಆದರೆ, ಈಗ ಕೆ-ರೈಡ್ನಲ್ಲಿ ಶೇ.51 ಅಥವಾ ಅದಕ್ಕಿಂತಲೂ ಹೆಚ್ಚಿನ ಹಣವನ್ನು ಭರಿಸಲು ರಾಜ್ಯ ಮುಂದೆ ಬಂದಿದೆ.