Advertisement

ಲೋಕಸಭೆ ಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಅಮೇಥಿಗೆ ರಾಹಲ್‌ ಗಾಂಧಿ ಭೇಟಿ

10:58 AM Jul 11, 2019 | Team Udayavani |

ಅಮೇಥಿ, ಉತ್ತರ ಪ್ರದೇಶ: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಪರಾಭವ ಅನುಭವಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್‌ ಗಾಂಧಿ ಇಂದು ಬುಧವಾರ ತಮ್ಮ ಅಮೇಥಿ ಕ್ಷೇತ್ರಕ್ಕೆ ಭೇಟಿ ನೀಡಿದರು.

Advertisement

ಕಳೆದ ಜೂನ್‌ 25ರಂದು ತಿಲೋಯಿ ವಿಧಾನಸಭಾ ಕ್ಷೇತ್ರದ ಪ್ರಭಾರಿ ಮಾತಾ ಪ್ರಸಾದ್‌ ವೈಶ್‌ ಅವರ ನಿಕಟ ಸಂಬಂಧಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ರಾಹುಲ್‌ ಅವರು ವೈಶ್‌ ಅವರ ಮನೆಗೆ ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಅನಂತರ ಗೌರೀಗಂಜ್‌ ನಲ್ಲಿನ ನಿರ್ಮಲಾ ದೇವಿ ಎಜುಕೇಶನಲ್‌ ಇನ್‌ಸ್ಟಿಟ್ಯೂಟ್‌ ನಲ್ಲಿ ಪಕ್ಷದ ಪದಾಧಿಕಾರಿಗಳನ್ನು, ನಾಯಕರನ್ನು ಭೇಟಿ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next