Advertisement

ದುಡ್ಡು ಕೊಡದಿದ್ರೆ 1 ದಿನದ ಕೆಲಸಕ್ಕೆ  ತಿಂಗಳು ಅಲೆಸುತ್ತಾರೆ

01:41 PM Mar 02, 2022 | Team Udayavani |

ಎಚ್‌.ಡಿ.ಕೋಟೆ: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಇಲ್ಲದೆ ಸಾರ್ವಜನಿಕ ಕೆಲಸ ಮಾಡುತ್ತಿಲ್ಲ. ಹಣ ನೀಡದೇ ಇದ್ದರೆ ಒಂದುದಿನದಲ್ಲಾಗುವ ಕೆಲಸ 1 ತಿಂಗಳು ಮುಂದೂಡು ತ್ತಾರೆ ಅನ್ನುವ ದೂರುಗಳಿವೆ. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಅನಿಲ್‌ಚಿಕ್ಕಮಾದು ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂದಾಯ ಇಲಾಖೆ, ಗ್ರಾಪಂ ಅಧಿಕಾರಿಗಳು ಬಡಜನರಿಗೆ ಸರ್ಕಾರ ಮಂಜೂರು ಮಾಡುವ ಮನೆಗಳ ಮಂಜೂರಾತಿಗೆ25 ಸಾವಿರ ರೂ.ನಿಂದ 1 ಲಕ್ಷ ರೂ. ಲಂಚಪಡೆಯುತ್ತೀರಿ ಅನ್ನುವ ಆರೋಪ ಜನರಿಂದಷ್ಟೇಅಲ್ಲ, ಮಾಧ್ಯಮಗಳಿಂದಲೂ ತಿಳಿದು ಬಂದಿದೆ ಎಂದು ಹೇಳಿದರು.

ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ: ವೈದ್ಯರು ತುರ್ತುವಾಹನಗಳ ಸೌಲಭ್ಯ ನೀಡುತ್ತಿಲ್ಲ, ರೋಗಿಗಳಿಗೆ ಸೂಕ್ತ ಚಿಕಿತ್ಸೆಸಿಗುತ್ತಿಲ್ಲ, ರಾತ್ರಿ ವೇಳೆ ತಾಲೂಕು ಆಸ್ಪತ್ರೆಗಳಲ್ಲಿವೈದ್ಯರು ಇರುವುದಿಲ್ಲ. ಔಷ ಧಿಯನ್ನು ಹೊರಗೆಖರೀದಿಸಲು ಚೀಟಿ ಬರೆದುಕೊಡುತ್ತಿದ್ದಾರೆ ಅನ್ನುವಆರೋಪಗಳು ಕೇಳಿ ಬರುತ್ತಿವೆ ಎಂದು ಹೇಳಿದರು.

ಮನೆಗೆ ಕಳುಹಿಸುತ್ತೇವೆ: ಹಣ ನೀಡದೇ ಇದ್ದರೆ 1 ದಿನದಲ್ಲಾಗುವ ಸರ್ಕಾರಿ ಕೆಲಸ ತಿಂಗಳಾದರೂ ಮಾಡದೇ, ಬಡಜನರನ್ನು ಅಲೆಸುತ್ತೀರಿ. ಇದೆಲ್ಲಾ ಸರಿಯಾಗುವುದಿಲ್ಲ, ಈಗಿಂದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇದ್ದರೆ, ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ, ಮನೆ ಕಳುಹಿಸುವ ಎಚ್ಚರಿಕೆ ನೀಡಿದರು.

ಈ ಬಾರಿ ಎಚ್‌.ಡಿ.ಕೋಟೆ ತಾಲೂಕಿನ ಶಾಲೆಗಳುಕಾಲೇಜುಗಳ ಕಟ್ಟಡಗಳು, ಮೂಲ ಸೌಲಭ್ಯಗಳಿಗೆಹೆಚ್ಚು ಅನುದಾನ ನೀಡಿದ್ದೇನೆ. ಶಿಕ್ಷಣ ಇಲಾಖೆಅಧಿಕಾರಿಗಳು ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಹೆಚ್ಚು ತರಬೇಕು ಎಂದು ಹೇಳಿದರು.

Advertisement

ಇನ್ಸ್‌ಪೆಕ್ಟರ್‌ಗಳು ಗೈರು: ಸಭೆ ಆರಂಭಕ್ಕೂ ಮುನ್ನಸರ್ಕಲ್‌ಇನ್ಸ್‌ಪೆಕ್ಟರ್‌ಗಳು, ಎಸ್‌ಐ ಸಭೆಗೆಗೈರಾಗಿದ್ದರಿಂದ ಕೆಂಡಮಂಡಲರಾದ ಶಾಸಕರು, ಇನ್ಸ್‌ಪೆಕ್ಟರ್‌ ಸಭೆಗೆ ಆಗಮಿಸುವ ತನಕ ಪ್ರಗತಿ ಪರಿಶೀಲನಾ ಸಭೆ ನಡೆಸುವುದಿಲ್ಲ ಎಂದು ಪಟ್ಟುಹಿಡಿದರು.

ರಾಜ್ಯಪಾಲರ ಬಂದೂಬಸ್ತ್ಗೆ ಸಿದ್ಧತೆನಡೆಸುತ್ತಿದ್ದ ಸರ್ಕಲ್‌ಇನ್ಸ್‌ಪೆಕ್ಟರ್‌ ಬಸವರಾಜು ಎಸ್ಪಿಆದೇಶದಂತೆ ತಡವಾಗಿ ಸಭೆಗೆ ಆಗಮಿಸಿದರು.

ಶಾಸಕರ ಆದೇಶಕ್ಕೆ ಬೆಲೆ ಇಲ್ಲವೆ: ಬಳಿಕ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು, ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿ ಸಿದಂತೆಶಾಸಕನಾಗಿ ನಾನು ಹೇಳಿದರೆ ಸ್ಪಂದಿಸುತ್ತಿಲ್ಲ. ಬೇರೆ ಯಾರೋ ಹೇಳಿದರೆ ಬಿಟ್ಟು ಕಳುಸುತ್ತೀರಿ, ಶಾಸಕರ ಆದೇಶಕ್ಕೆ ಬೆಲೆ ಇಲ್ಲವೆ ಎಂದು ವಾಗ್ಧಾಳಿ ನಡೆಸಿದರು.

ಸಭೆಯಲ್ಲಿ ತಹಶೀಲ್ದಾರ್‌ ನರಗುಂದ, ಸರಗೂರು ತಹಶೀಲ್ದಾರ್‌ ಚಲುವರಾಜು, ಇಒಜೆರಾಲ್ಡ್‌ ರಾಜೇಶ್‌, ಪುರಸಭೆ ಉಪಾಧ್ಯಕ್ಷೆ ಗೀತಾಗಿರೀಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಸಿ.ನರಸಿಂಹಮೂರ್ತಿ, ತಾಲೂಕು ಅಧಿ ಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next