Advertisement

ದೇಶ ಮೋದಿಯವರ ರೂಪದಲ್ಲಿ ಅಭಿವೃದ್ಧಿ ಪುರುಷನನ್ನು ಪಡೆದಿದೆ : ಸಾವಂತ್

07:45 PM Jan 31, 2022 | Team Udayavani |

ಪಣಜಿ: ಭಾರತೀಯ ಜನತಾ ಪಕ್ಷವು ದೇಶದ ಮೊದಲ ಪಕ್ಷವಾಗಿದೆ. ಅದಕ್ಕಾಗಿಯೇ ದೇಶವು ಪ್ರಧಾನಿ ಮೋದಿಯವರ ರೂಪದಲ್ಲಿ ಅಭಿವೃದ್ಧಿ ಪುರುಷನನ್ನು ಪಡೆದಿದೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಪೂರ್ಣ ಬಹುಮತ ನೀಡಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.

Advertisement

ವಾಸ್ಕೊದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು- ವಾಸ್ಕೊ, ಮುರಗಾಂವ, ದಾಬೋಲಿಂ, ಕುಠ್ಠಾಳಿ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲಿದೆ. ಮುರಗಾಂವ ತಾಲೂಕಿನಲ್ಲಿ ಶೇ 100 ರಷ್ಟು ಬಿಜೆಪಿ ಯಶಸ್ಸು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನು ಜನತೆ ಆಯ್ಕೆ ಮಾಡುವ ಮೂಲಕ ಇತಿಹಾಸ ಸೃಷ್ಠಿಸಲಿದ್ದಾರೆ. ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಗೋವಾ ಸ್ವಾವಲಂಭಿಯಾಗಿಸಲು ಪ್ರಧಾನಿ ಮೋದಿ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.

ಈ ಸಂದರ್ಭದಲ್ಲಿ ವಾಸ್ಕೊ ಬಿಜೆಪಿ ಅಭ್ಯರ್ಥಿ ಕೃಷ್ಣ ಸಾಲ್ಕರ್, ಮಹಾರಾಷ್ಟ್ರದ ಮಾಜಿ ಪ್ರವಾಸೋದ್ಯಮ ಸಚಿವ ಪ್ರಮೋದ ಜತಾರ್, ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮಾಜಿ ಸಚಿವ ಕಾಗೋಡಿಗೆ ಶಾಸಕ ಹಾಲಪ್ಪ ಅಗೌರವ ತೋರಿಲ್ಲ; ಬಿಜೆಪಿ ಪ್ರತಿಪಾದನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next