Advertisement

ಅಂಚೆ ನೌಕರರ ಅನಿರ್ದಿಷ್ಟಾವಧಿ ಧರಣಿ

11:32 AM May 24, 2018 | Team Udayavani |

ಯಲಹಂಕ: 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಪದಾಧಿಕಾರಿಗಳು ಯಲಹಂಕದ ಸಂತೆ ವೃತ್ತದ ಬಳಿ ಇರುವ ಅಂಚೆ ಕಚೇರಿ ಎದುರು ಬುಧವಾರದಿಂದ ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದರು.

Advertisement

ಕೇಂದ್ರ ಸರ್ಕಾರಿ ನೌಕರರಿಗೆ ಈಗಾಗಲೇ 7ನೇ ವೇತನ ಆಯೋಗದ ವರದಿಯಂತೆ ವೇತನ ಹೆಚ್ಚಳ ಸೇರಿ ಇತರೆ ಭತ್ಯೆ ನೀಡಲಾಗುತ್ತಿದೆ. ಆದರೆ ಅಂಚೆ ನೌಕರರನ್ನು ಇದರಿಂದ ಹೊರಗಿಟ್ಟಿರುವುದು ಸರಿಯಲ್ಲ.

ಗ್ರಾಮೀಣ ಅಂಚೆ ನೌಕರರಿಗೆ ನ್ಯಾಯಮೂರ್ತಿ ತಲ್ವಾರ್‌ ಸಮಿತಿ ವರದಿಯನ್ವಯ ಅಂಚೆ (5ಗಂಟೆಗಿಂತಲೂ ಅಧಿಕ ಸೇವೆ ಸಲ್ಲಿಸುವ) ಸೇವಕರ ಸೇವೆ ಕಾಯಂಗೊಳಿಸಬೇಕು. ಕಮಲೇಶಚಂದ್ರ ಸಮಿತಿ ಶಿಫಾರಸು ಅನುಮೋದಿಸಬೇಕು
ಎಂಬ ಬೇಡಿಕೆಗಳನ್ನು ಕೇಂದ್ರ ಸರಕಾರ ಇದುವರೆಗೂ ಈಡೇರಿಸಿಲ್ಲ ಎಂದು ಸಂಘಟನೆ ಪದಾಧಿಕಾರಿ ಪ್ರಸನ್ನಕುಮಾರ್‌ ದೂರಿದರು.

ಈ ಅನ್ಯಾಯ ವಿರೋಧಿಸಿ ಕೇಂದ್ರ ಮತ್ತು ವಲಯ ಸಂಘಟನೆಗಳು ಕೊಟ್ಟಿರುವ ಕರೆ ಬೆಂಬಲಿಸಿ ಅನಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ ಎಂದು ಉದಯಕುಮಾರ್‌ ಉಪಾದ್ಯಾಯ ಮಾಹಿತಿ ನೀಡಿದರು. ರುದ್ರೇಶ್‌, ತಿಲಕ್‌, ಮನೋಹರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next