Advertisement

ಅಸ್ಸಾಂ, ರಾಜಸ್ಥಾನ ಪ್ರವಾಹ: ಮೃತರ ಕಟುಂಬಕ್ಕೆ ತಲಾ 2 ಲಕ್ಷ ಪರಿಹಾರ

12:35 PM Jul 31, 2017 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾ, ಮತ್ತು ರಾಜಸ್ಥಾನದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. 

Advertisement

ಇದೇ ವೇಳೆ ಈ ಪ್ರವಾಹದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಪ್ರಧಾನಿ ಮೋದಿ ಅವರು ತಲಾ 50,000 ರೂ. ಪರಿಹಾರ ಪ್ರಕಟಿಸಿದ್ದಾರೆ.  ಈ ಎರಡೂ ರಾಜ್ಯಗಳಲ್ಲಿ ಪ್ರವಾಹದಿಂದಾಗಿ ಅನೇಕ ಜೀವ ಹಾನಿ ಮಾತ್ರವಲ್ಲದೆ ಅಪಾರ ಸೊತ್ತು, ಬೆಳೆ ನಾಶ-ನಷ್ಟ ಉಂಟಾಗಿದೆ. 

ಪ್ರಧಾನಿ ಮೋದಿ ಅವರು ನಾಳೆ ಮಂಗಳವಾರ ಅಸ್ಸಾಂ ಗೆ ಭೇಟಿ ನೀಡುವ ನಿರೀಕ್ಷೆ ಇದೆ. ಈ ಭೇಟಿಯಲ್ಲಿ ಅವರೇ ಖುದ್ದಾಗಿ ನಾಶ-ನಷ್ಟದ ನೇರ ಮಾಹಿತಿಯನ್ನು ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next