Advertisement

ಇಂದು GST ಸಭೆ: ವಿಪಕ್ಷ ಆಳ್ವಿಕೆಯ ರಾಜ್ಯಗಳ ಗದ್ದಲ?

12:07 PM Nov 03, 2015 | Hari Prasad |

ಹೊಸದಿಲ್ಲಿ: ಜಿಎಸ್‌ಟಿ ಮಂಡಳಿಯ 42ನೇ ಸಭೆಯು ಸೋಮವಾರ (ಅ.5) ನಡೆಯಲಿದ್ದು, ರಾಜ್ಯಗಳ ಜಿಎಸ್‌ಟಿ ಬಾಕಿ ಹಣ ಬಿಡುಗಡೆಯ ವಿಚಾರವಾಗಿ ಗದ್ದಲಮಯವಾಗುವ ಸಂಭವವಿದೆ.

Advertisement

ರಾಜ್ಯಗಳಿಗೆ ನೀಡಬೇಕಾಗಿರುವ ಜಿಎಸ್‌ಟಿ ಬಾಕಿಯನ್ನು ಸಾಲವಾಗಿ ನೀಡುವ ಕೇಂದ್ರ ಸರಕಾರದ ಆಯ್ಕೆಯನ್ನು 21 ರಾಜ್ಯಗಳು ಸ್ವೀಕರಿಸಿವೆ.

ಇವುಗಳಲ್ಲಿ ಬಿಜೆಪಿ ಆಳ್ವಿಕೆಯ ರಾಜ್ಯಗಳೇ ಅಧಿಕ. ಆದರೆ ವಿಪಕ್ಷಗಳ ಆಡಳಿತ ಇರುವ ಪಂಜಾಬ್‌, ಕೇರಳ, ಪ. ಬಂಗಾಲದಂತಹ ರಾಜ್ಯಗಳು ಈ ಆಯ್ಕೆಯನ್ನು ವಿರೋಧಿಸಿವೆ.

ಸೋಮವಾರದ ಸಭೆಯಲ್ಲಿ ಈ ರಾಜ್ಯಗಳು ಕೇಂದ್ರ ಸರಕಾರದ ಸಾಲ ಆಯ್ಕೆಯನ್ನು ಬಲವಾಗಿ ವಿರೋಧಿಸುವ ಸಾಧ್ಯತೆಯಿದ್ದು, ಪರ್ಯಾಯ ಮಾರ್ಗಕ್ಕಾಗಿ ಆಗ್ರಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಾಲ ಆಯ್ಕೆಗೆ ವಿರೋಧ
ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜ್ಯಗಳು 2.35 ಲಕ್ಷ ಕೋ.ರೂ. ಜಿಎಸ್‌ಟಿ ಆದಾಯ ಕೊರತೆ ಅನುಭವಿಸಿವೆ. ಕೇಂದ್ರದ ಲೆಕ್ಕಾಚಾರದಂತೆ ಈ ಪೈಕಿ 97 ಸಾವಿರ ಕೋ.ರೂ. ಜಿಎಸ್‌ಟಿ ಜಾರಿ ಸಂಬಂಧಿಯದ್ದಾದರೆ ಇನ್ನುಳಿದ 1.38 ಲಕ್ಷ ಕೋ.ರೂ. ರಾಜ್ಯಗಳ ಜಿಎಸ್‌ಟಿ ಆದಾಯದ ಮೇಲೆ ಕೋವಿಡ್ 19 ಪರಿಣಾಮದಿಂದ ಉಂಟಾಗಿದೆ.

Advertisement

ಕೊರತೆಯಾಗಿರುವ 97 ಸಾವಿರ ಕೋ. ರೂ.ಗಳನ್ನು ಆರ್‌ಬಿಐ ಮೂಲಕ ಸಾಲವಾಗಿ ಪಡೆಯುವ ಅಥವಾ 2.35 ಲಕ್ಷ ಕೋ. ರೂ.ಗಳನ್ನು ಬಾಹ್ಯ ಸಾಲವಾಗಿ ಪಡೆಯುವ ಆಯ್ಕೆಗಳನ್ನು ಕೇಂದ್ರ ಸರಕಾರವು ರಾಜ್ಯಗಳ ಮುಂದೆ ಇರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next