Advertisement

Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ

04:02 PM May 19, 2024 | Team Udayavani |

ಪಣಜಿ: ಮುಂಗಾರು ಪೂರ್ವದಲ್ಲಿ ಅಪಾಯಕಾರಿ ಮರಗಳನ್ನು ಕಡಿಯಲು ರಾಜ್ಯದ ಪುರಸಭೆ ಮತ್ತು ಪಂಚಾಯತ್‍ಗಳಿಗೆ ವರ್ಗವಾರು ಆರ್ಥಿಕ ನೆರವು ನೀಡುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎರಡೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.

Advertisement

ಇದರ ಪ್ರಕಾರ ಪಣಜಿ ಮಹಾನಗರ ಪಾಲಿಕೆಗೆ 1 ಲಕ್ಷ ರೂ. ಆದರೆ ‘ಸಿ’ ಮಟ್ಟದ ಪುರಸಭೆಗಳು ಮತ್ತು ಪಂಚಾಯತ್‍ಗಳು 25,000 ರೂ.ಗಳನ್ನು ನೀಡಲಾಗುತ್ತಿದೆ.

ಮುಂಗಾರು ಪೂರ್ವ ಕಾಮಗಾರಿ ವೇಳೆ ರಾಜ್ಯದ ನಾನಾ ಕಡೆ ಅಪಾಯಕಾರಿ ಮರಗಳನ್ನು ಕಡಿಯುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಎರಡೂ ಜಿಲ್ಲಾಧಿಕಾರಿಗಳು ರಾಜ್ಯ ವಿಕೋಪ ನಿಧಿಯಿಂದ ನಗರಸಭೆ, ಪುರಸಭೆ ಹಾಗೂ ಪಂಚಾಯಿತಿಗಳಿಗೆ ಹಣ ನೀಡಬೇಕು ಎಂದು ಪ್ರಾಧಿಕಾರ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಹಣ ವಿನಿಯೋಗಿಸುವ ಮುನ್ನ ನಗರಸಭೆ, ಪುರಸಭೆ, ಪಂಚಾಯಿತಿಗಳಿಂದ ಈ ಹಿಂದೆ ನೀಡಿದ ಹಣ ಬಳಕೆ ಬಗ್ಗೆ ಪ್ರಮಾಣ ಪತ್ರ ಪಡೆಯುವುದು ಅಗತ್ಯ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾರೂ ಈ ನಿಧಿಯನ್ನು ರಾಜಕೀಯ ಲಾಭಕ್ಕೆ ಬಳಸದಂತೆ ಎಚ್ಚರಿಕೆ ವಹಿಸಬೇಕು. ಈ ಅಧಿಸೂಚನೆಗೆ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪೂರ್ವಾನುಮತಿಯನ್ನೂ ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next