Advertisement

ಪೈವಳಿಕೆ ಗ್ರಾಮ ಪಂಚಾಯತ್‌ ಜನಪರ ಯೋಜನೆಯ ವರ್ಕಿಂಗ್‌ ಗ್ರೂಪ್‌ ಸಭೆ

02:56 PM Feb 25, 2017 | Team Udayavani |

ಕುಂಬಳೆ: ಪೈವಳಿಕೆ ಗ್ರಾಮ ಪಂಚಾಯತ್‌ನ ಜನಪರ ಯೋಜನೆಯ ವರ್ಕಿಂಗ್‌ ಗ್ರೂಪ್‌ ಸಭೆಯು ಗ್ರಾ.ಪಂ. ಕುಟುಂಬಶ್ರೀ ಸಭಾಭವನದಲ್ಲಿ ಜರಗಿತು. ಗ್ರಾ.ಪಂ.ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿ’ಸೋಜಾ ಅಧ್ಯಕ್ಷತೆ ವಹಿಸಿದ ಸಭೆಯನ್ನು ಗ್ರಾ.ಪಂ. ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ರಾಬಿಯಾ, ಫಾತಿಮತ್‌ ಝುಹರಾ, ಎಂ.ಕೆ. ಅಮೀರ್‌, ಬ್ಲಾಕ್‌ ಪಂಚಾಯತ್‌ ಸದಸ್ಯ ಪ್ರಸಾದ್‌ ರೈ ಕಯ್ನಾರು, ಗ್ರಾ.ಪಂ. ಸದಸ್ಯರಾದ ಜಯಲಕ್ಷ್ಮೀ ಭಟ್‌, ಹರೀಶ್‌ ಬೊಟ್ಟಾರಿ, ಸುಬ್ರಹ್ಮಣ್ಯ ಭಟ್‌, ಭವ್ಯಾ, ವಸಂತಿ, ರಾಜೀವಿ, ಕಿಶೋರ್‌ ಕುಮಾರ್‌, ಗಣೇಶ್‌ ಕುಲಾಲ್‌, ರಹೀಂ ಆವಳ, ಚನಿಯ ಕೊಮ್ಮಂಗಳ, ರಜಿಯಾ ರಝಾಕ್‌, ಮಾಜಿ ಉಪಾಧ್ಯಕ್ಷೆ ದಿನೇಶ್ವರಿ ನಾಗೇಶ್‌, ಮಾಜಿ ಸದಸ್ಯರಾದ ಬಿ. ಸೀತಾರಾಮ ಶೆಟ್ಟಿ, ಹಮೀದ್‌ ಕುಂಞಾಲಿ, ಕೆ. ನಾರಾಯಣ ಶೆಟ್ಟಿ, ಅಬ್ದುಲ್‌ ರಝಾಕ್‌ ಚಿಪ್ಪಾರ್‌, ಝಡ್‌.ಎ. ಕಯ್ನಾರ್‌, ವಿವಿಧ ಪಕ್ಷಗಳ ನಾಯಕರಾದ ಮೋಹನ ರೈ ಕಯ್ನಾರು, ಪ್ರವೀಣ ಚಂದ್ರ ಬಲ್ಲಾಳ್‌, ಅಂದುಞಿ ಹಾಜಿ, ಅಜಿತ್‌ ಎಂ.ಸಿ., ಲಾರೆನ್ಸ್‌ ಡಿ’ಸೋಜಾ, ಸೆಲೀಲ್‌ ಕಳಾಯಿ ಉಪಸ್ಥಿತರಿದ್ದರು. 

Advertisement

ವಿವಿಧ ಗ್ರೂಪ್‌ ಸಭೆಯಲ್ಲಿ ಪಂಚ ವಾರ್ಷಿಕ ಯೋಜನೆಗಿರುವ ಕಾಮಗಾರಿಗಳನ್ನು ದಾಖಲಿಸಲಾಯಿತು. ಕೇಂದ್ರ ರಾಜ್ಯ ಸರಕಾರಗಳ ಲೈಫ್‌ ಗೃಹ ನಿರ್ಮಾಣ ಯೋಜನೆ, ಹಸಿರು ಕೇರಳ, ಸಾರ್ವತ್ರಿಕ ಶಿಕ್ಷಣ, ಜಲಸಂರಕ್ಷಣೆ ಯೋಜನೆಗಳ ಕುರಿತು ಸಭೆಯಲ್ಲಿ ವಿವರಿಸಲಾಯಿತು. ವಿವಿಧ ಇಲಾಖೆಗಳ ನಿರ್ವಹಣಾಧಿಕಾರಿಗಳು, ಕುಟುಂಬಶ್ರೀ, ರಾಷ್ಟ್ರೀಯ ಉದೋÂಗ ಖಾತರಿ, ಸ್ವಸಹಾಯ ಸಂಘಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಗ್ರಾ.ಪಂ. ಕಾರ್ಯದರ್ಶಿ ಫ್ರಾನ್ಸಿಸ್‌ ಸ್ವಾಗತಿಸಿದರು. ಸಹಾಯಕ ಅಧಿಕಾರಿ ಸುರೇಂದ್ರನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next