Advertisement

Cauvery: “ನಮ್ಮ ನೀರು ತಮಿಳುನಾಡು ಹಕ್ಕು”: ಎಚ್‌.ಡಿ. ಕುಮಾರಸ್ವಾಮಿ

11:25 PM Aug 20, 2023 | Team Udayavani |

ಮೈಸೂರು: ಈ ಹಿಂದೆ “ನಮ್ಮ ನೀರು ನಮ್ಮ ಹಕ್ಕು’ ಎಂದು ಹೇಳುತ್ತಿದ್ದವರು, ಈಗ “ನಮ್ಮ ನೀರು ತಮಿಳುನಾಡು ಹಕ್ಕು’ ಎನ್ನುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಮಾಜಿ ಮುಖ್ಯ ಮಂತ್ರಿ ಎಚ್‌.ಡಿ. ಕುಮಾ ರ ಸ್ವಾಮಿ ವಾಗ್ಧಾಳಿ ನಡೆಸಿದರು.

Advertisement

ನಗರದ ಸೂತ್ತರು ಶಾಖಾ ಮಠಕ್ಕೆ ರವಿವಾರ ಭೇಟಿ ನೀಡಿದ ಅವರು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡಿದವರು ಈಗ ಏನು ಮಾಡುತ್ತಿದ್ದಾರೆ? ಚುನಾವಣೆಗೂ ಮುನ್ನ ನೀರಿಗಾಗಿ ಹೋರಾಟ ಮಾಡಿದವರು ಈಗ ಏನು ಮಾಡುತ್ತಿದ್ದಾರೆ ? ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಮುಂದೆ ನಮ್ಮವರು ವಾದವನ್ನೇ ಮಾಡಿಲ್ಲ ಎಂದರು.

ಸಾಲ ತೀರಿಸುವವರು ಯಾರು: ಗ್ಯಾರಂಟಿ ಯೋಜನೆಗಳಿಗಾಗಿ 86 ಸಾವಿರ ಕೋಟಿ ರೂ. ಸಾಲ ಮಾಡಲಾಗಿದೆ. ಈಗ ಮಾಡಿದ ಸಾಲವನ್ನು ತೀರಿಸುವವರು ಯಾರು? ಗ್ಯಾರಂಟಿ ಯೋಜನೆಗಳ ಕಾರಣ ದಿಂದ ಅಭಿವೃದ್ಧಿ ನಿಂತೇ ಹೋಗಿದೆ. ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಮುಂದೆ ಇದೆಲ್ಲ ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next