Advertisement

ರಾಜಕಾಲುವೆ ಒತ್ತುವರಿ ತೆರವಿಗೆ ವಿರೋಧ

11:59 AM Jan 19, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿಂದ ಮಂಕಾಗಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ವೇಗ ಪಡೆದಿದ್ದು, ಬುಧವಾರ ಹಲವೆಡೆ ಒತ್ತುವರಿ ತೆರವುಗೊಳಿಸಲಾಗಿದೆ.  ಈ ಮಧ್ಯೆ ಜೆ.ಸಿ.ನಗರದ ಮಠದಹಳ್ಳಿ ಬಳಿ ನಡೆದ ತೆರವು ಕಾರ್ಯಾಚರಣೆ ವೇಳೆ ಕಟ್ಟಡದ ಮಾಲಿಕರು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದು ಅಡ್ಡಿಪಡಿಸಿದ ಘಟನೆ ನಡೆದಿದೆ.

Advertisement

ಬಿಬಿಎಂಪಿ ಅಧಿಕಾರಿಗಳು ಬುಧವಾರ ಪೂರ್ವ ವಲಯದ ಜೆ.ಸಿ.ನಗರ ವಾರ್ಡ್‌ನ ಮಠದಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳ ತೆರವಿಗೆ ಮುಂದಾದಾಗ ಕಟ್ಟಡ ಮಾಲಿಕರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿ ಸ್ವಲ್ಪ ಕಾಲ ಕಾರ್ಯಾಚರಣೆಯೇ ಸ್ಥಗಿತಗೊಂಡಿತ್ತು.

ಏನಿದು ಘಟನೆ?: ಹೆಬ್ಟಾಳದ ಜೆ.ಸಿ.ನಗರ ವಾರ್ಡ್‌ನ ಮಠದಹಳ್ಳಿ ವೈಟ್‌ ಹೌಸ್‌ ಅಪಾರ್ಟ್‌ಮೆಂಟ್‌ನಿಂದ 20 ಕೋಟಿ ರೂ. ಮೌಲ್ಯದ 9 ಗುಂಟೆ ರಾಜಕಾಲುವೆ ಒತ್ತುವರಿಯಾಗಿತ್ತು. ಒತ್ತುವರಿ ಜಾಗವನ್ನು ಅಪಾರ್ಟ್‌ಮೆಂಟ್‌ ಮಾಲಿಕರು ಕಾಂಪೌಂಡ್‌, ಅಪಾರ್ಟ್‌ಮೆಂಟ್‌ಗೆ ಒಳರಸ್ತೆ ಮತ್ತಿತರ ಮೂಲಸೌಕರ್ಯ ಕಲ್ಪಿಸಿಕೊಳ್ಳಲು ಅಕ್ರಮವಾಗಿ ಬಳಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಸರ್ವೇ ನಡೆಸಿ ಒತ್ತುವರಿ ಗುರುತಿಸಿದ್ದ ಅಧಿಕಾರಿಗಳು ಬುಧವಾರ ತೆರವಿಗೆ ಮುಂದಾದಾಗ ಅಪಾರ್ಟ್‌ಮೆಂಟ್‌ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳೆಯರಂತೂ ಅಧಿಕಾರಿಗಳನ್ನೇ ಅಪಾರ್ಟ್‌ಮೆಂಟ್‌ನ ಆವರಣದಿಂದ ಹೊರತಳ್ಳಿದ ಪ್ರಸಂಗ ನಡೆಯಿತು.

ಬರಿಗೈಲಿ ವಾಪಸ್‌: ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು, ಒಂದು ಕಡೆಯಿಂದ ರಾಜಕಾಲುವೆ ಒತ್ತುವರಿ ಗುರುತು ಮಾಡಿ ತೆರವುಗೊಳಿಸದೆ ಮಧ್ಯ ಮಧ್ಯೆ ತೆರವುಗೊಳಿಸಲಾಗುತ್ತಿದೆ. ಪ್ರಬಲರ ಆಸ್ತಿ ಒತ್ತುವರಿ ತೆರವುಗೊಳಿಸಲು ನಿಮಗೆ ಧೈರ್ಯ ಇಲ್ಲವೇ ಎಂದು ಜೆಸಿಬಿ ಯಂತ್ರವನ್ನು ಅಡ್ಡಗಟ್ಟಿ ಪ್ರತಿಭಟಿಸಿದರು. ಈ ಹಿನ್ನೆಲೆಯಲ್ಲಿ ಬುಧವಾರ ಕಟ್ಟಡದ ಒತ್ತುವರಿ ಭಾಗ ತೆರವುಗೊಳಿಸದೆ ಅಧಿಕಾರಿಗಳು ವಾಪಸಾದರು.

Advertisement

ಸ್ವಯಂ ತೆರವಿಗೆ ಅವಕಾಶ: ಮತ್ತೂಂದೆಡೆ ಪಟೇಲ್ಸ್‌ ಕ್ಲಬ್‌ನಿಂದ 6.5 ಗುಂಟೆ ಜಾಗ ಒತ್ತುವರಿಯಾಗಿದ್ದು, ಒತ್ತುವರಿದಾರರು ಸ್ಥಳದಲ್ಲಿ ಕಾಂಪೌಂಡ್‌, ಅಡುಗಮನೆ, ಶೆಡ್‌ ಸಭಾಂಗಣ ನಿರ್ಮಾಣ ಮಾಡಿದ್ದಾರೆ. ಇವುಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರೆ ವಾಟರ್‌, ಸ್ಯಾನಿಟರಿ ಸಂಪರ್ಕಗಳು ಹಾಳಾಗುತ್ತವೆ. ಹೀಗಾಗಿ ಸ್ವಯಂ ಪ್ರೇರಿತ ತೆರವಿಗೆ ಅವಕಾಶ ನೀಡಬೇಕು ಎಂದು ಕ್ಲಬ್‌ನವರು ಮನವಿ ಮಾಡಿ ಸ್ವತಃ ತೆರವಿಗೆ ಮುಂದಾದರು. 

ಇನ್ನು ಎಂಬಸ್ಸಿ ಗ್ರೂಪ್‌ನ ಮಾಲಿಕರು ಸಹ ಬಿಬಿಎಂಪಿಗೆ ಸೇರಿದ 5 ಗುಂಟೆ ರಾಜಕಾಲುವೆ ಜಾಗ ಒತ್ತುವರಿ ಮಾಡಿಕೊಂಡಿದ್ದು, ಜಾಗದಲ್ಲಿ ನಿರ್ಮಿಸಿದ್ದ ಪಾರ್ಕ್‌, ಈಜುಕೊಳವನ್ನು ಬುಧವಾರ ತೆರವುಗೊಳಿಸಲಾಯಿತು. ಯಲಹಂಕ ವಲಯದ ಅನಂದಪುರ ಹಾಗೂ ಕೋಗಿಲು ಗ್ರಾಮದಲ್ಲಿ ಒತ್ತುವರಿಯಾಗಿದ್ದ ಖಾಲಿ ನಿವೇಶನಗಳನ್ನೂ ಇದೇ ವೇಳೆ ಅಧಿಕಾರಿಗಳು ತೆರವುಗೊಳಿಸಿದರು.

ಮಠದಹಳ್ಳಿ ಬಳಿ 4 ತಿಂಗಳ ಹಿಂದೆಯೇ ಒತ್ತುವರಿ ಗುರುತು ಮಾಡಿ ಮಾಲಿಕರಿಗೆ ಸೂಚನೆ ನೀಡಲಾಗಿತ್ತು. ಆದರೂ ಸ್ವಯಂ ಪ್ರೇರಿತ ತೆರವಿಗೆ ಮುಂದಾಗದ ಹಿನ್ನೆಲೆಯಲ್ಲಿ ಬುಧವಾರ ತೆರವಿಗೆ ತೆರಳಿದರೆ ದಬ್ಟಾಳಿಕೆ ಮಾಡಿ ಅಡ್ಡಿಪಡಿಸಿದ್ದಾರೆ. ಗುರುವಾರ ಪೊಲೀಸ್‌ ಸಹಕಾರದೊಂದಿಗೆ ತೆರವುಗೊಳಿಸುತ್ತೇವೆ.
-ಬಸವರಾಜಪ್ಪ, ಕಾರ್ಯ ಪಾಲಕ ಎಂಜಿನಿಯರ್‌, ಪೂರ್ವ ವಲಯ

Advertisement

Udayavani is now on Telegram. Click here to join our channel and stay updated with the latest news.

Next