“ಹಾಡು ಅಂದ್ರೆ ನಮ್ ಕಾಲದ ಹಾಡುಗಳು ಕಣ್ರೀ. ಆಗ ಸಾಹಿತ್ಯ, ಸಂಗೀತ ಎರಡೂ ಎಷ್ಟೊಂದು ಚಂದ ಇರ್ತಾ ಇತ್ತು’… ಅಂತ ಹಳೆ ಹಾಡುಗಳನ್ನು ನೆನಪು ಮಾಡಿಕೊಳ್ಳುವವರಿದ್ದಾರೆ. ಅಂಥವರಿಗಾಗಿಯೇ “ಗೀತ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿದೆ. ಎಪ್ಪತ್ತು, ಎಂಬತ್ತರ ದಶಕದ ಹಾಡುಗಳು ಹಾಗೂ ಭಾವಗೀತೆಗಳನ್ನು ಮೆಲುಕು ಹಾಕುವ ಈ ಸಂಗೀತ ಸಂಜೆಯನ್ನು ನಡೆಸುತ್ತಿರುವುದು ಸ್ವರಾಗಿನಿ ಮ್ಯೂಸಿಕಲ್ ಇವೆಂಟ್ಸ್ ಸಂಸ್ಥೆ. ಗಾಯಕರಾದ ಅಜಯ್ ವಾರಿಯರ್, ಎಂಡಿ ಪಲ್ಲವಿ, ಹರ್ಷರಂಜಿನಿ ನಿಖೀಲ್ ಪಾರ್ಥಸಾರಥಿ ಅವರು ಹಳೆಯ ಹಾಡುಗಳ ಮೂಲಕ ರಂಜಿಸಲಿದ್ದಾರೆ. ಸಂಗೀತ ನಿರ್ದೇಶಕರಾದ ರಾಜನ್, ನಟ ಶ್ರೀನಾಥ್ ಹಾಗೂ ಕವಿ ಲಕ್ಷ್ಮಣ ರಾವ್ ಜೊತೆಗಿರಲಿದ್ದಾರೆ. ಕೆಟ್ಗಳು ಬುಕ್ ಮೈ ಶೋನಲ್ಲಿ ಲಭ್ಯ.
ಎಲ್ಲಿ?: ಚೌಡಯ್ಯ ಮೆಮೊರಿಯಲ್ ಹಾಲ್, ಮಲ್ಲೇಶ್ವರ
ಯಾವಾಗ?: ಮೇ 20, ಭಾನುವಾರ ಸಂಜೆ 6
ಟಿಕೆಟ್ ದರ: ರೂ. 350ರಿಂದ ಶುರು
ಹೆಚ್ಚಿನ ಮಾಹಿತಿ: 9901293789