Advertisement

Kerala ;ಹಳೆ ಹೆಸರು’ ನೆನಪಿಸಿ ರಾಹುಲ್‌ ಬಗ್ಗೆ ಪಿಣರಾಯಿ ವಿಜಯನ್‌ ವ್ಯಂಗ್ಯ

02:00 AM Apr 21, 2024 | Team Udayavani |

ಕಲ್ಲಿಕೋಟೆ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್‌ ನಡುವಿನ ವಾಕ್ಸಮರ ತೀವ್ರ ಗೊಂಡಿದೆ. ರಾಹುಲ್‌ಗಿದ್ದ “ಹಳೆಯ ಹೆಸರೊಂದನ್ನು’ ನೆನಪು ಮಾಡಿರುವ ವಿಜಯನ್‌, ನೀವಿನ್ನೂ ಸುಧಾರಿಸಿ ಕೊಂಡಿಲ್ಲವೆಂದು ವ್ಯಂಗ್ಯವಾಡಿದ್ದಾರೆ. ಇದಕ್ಕೂ ಮುನ್ನ ಚುನಾವಣ ರ್‍ಯಾಲಿಯಲ್ಲಿ ವಿಜಯನ್‌ರನ್ನು ಯಾಕೆ ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸುತ್ತಿಲ್ಲ ಎಂದು ರಾಹುಲ್‌ ಪ್ರಶ್ನಿಸಿದ್ದರು.

Advertisement

ಅದಕ್ಕೆ ಕಲ್ಲಿಕೋಟೆ ರ್ಯಾಲಿಯಲ್ಲಿ ಪಿಣರಾಯಿ ಉತ್ತರಿಸಿ ರಾಹುಲ್‌ ನಿಮಗೊಂದು ಹಳೆಯ ಹೆಸರಿದೆ. ನೀವಿನ್ನೂ ಆ ಪರಿಸ್ಥಿತಿ ಯಿಂದ ಹೊರಬಂದಿಲ್ಲ ಎಂದಿದ್ದಾರೆ. ಕೇರಳ ಮಾಜಿ ಸಿಎಂ ವಿ.ಎಸ್‌.ಅಚ್ಯುತಾನಂದನ್‌, ಹಿಂದೆ ರಾಹುಲ್‌ರನ್ನು “ಅಮುಲ್‌ ಬೇಬಿ’ಎಂದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next