Advertisement

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

01:36 AM Apr 29, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗಾಗಿ ಆಮ್‌ ಆದ್ಮಿ ಪಕ್ಷ ರಚಿಸಿಕೊಂಡಿರುವ “ಜೈಲ್‌ ಕೆ ಜವಾಬ್‌ ಮೇ ಹಮ್‌ ವೋಟ್‌ ದೇಂಗೇ’ ಚುನಾವಣ ಪ್ರಚಾರದ ಹಾಡಿನಲ್ಲಿ ಕಂಟೆಂಟ್‌ ಮಾರ್ಪಾಡು ಮಾಡಿ, ಪ್ರಚಾರಕ್ಕೂ ಮುನ್ನ ತನ್ನ ಅನುಮತಿ ಪಡೆದುಕೊಳ್ಳಬೇಕು ಎಂದು ಚುನಾವಣ ಆಯೋಗವು ಆಪ್‌ಗೆ ಸೂಚಿಸಿದೆ.

Advertisement

ಸಿಎಂ ಅರವಿಂದ್‌ ಕೇಜ್ರಿವಾಲ್‌ ಜೈಲಿನ ಕಂಬಿಗಳ ಹಿಂದಿರುವ ಫೋಟೋವನ್ನು ಗುಂಪೊಂದು ಹಿಡಿದು ಆಕ್ರೋಶಗೊಂಡಿರುವ ವೀಡಿಯೋವನ್ನು ಹಾಡಿನಲ್ಲಿ ಬಳಸಲಾಗಿದೆ. ಇದು ನ್ಯಾಯಾಂಗದ ವಿರುದ್ದ ತಪ್ಪು ಸಂದೇಶ ನೀಡಲಿದೆ ಎಂದಿದೆ. ಆಯೋಗದ ಈ ಕ್ರಮಕ್ಕೆ ದಿಲ್ಲಿ ಸಚಿವೆ ಆತಿಶಿ ಆಕ್ಷೇಪಿಸಿ ನೀತಿ ಸಂಹಿತೆ ಉಲ್ಲಂ ಸಿದ ಬಿಜೆಪಿಯನ್ನು ಪ್ರಶ್ನಿಸಲು ಹಿಂಜರಿಯುವ ಆಯೋಗ ಆಪ್‌ ವಿಚಾರದಲ್ಲಿ ಪಕ್ಷಪಾತ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next