Advertisement

ಒಬಿಸಿ ಕೋಟಾ: ಆಯೋಗಕ್ಕೆ ರಾಷ್ಟ್ರಪತಿ ಅಂಕಿತ

09:24 AM Oct 04, 2017 | |

ಹೊಸದಿಲ್ಲಿ: ಹಿಂದುಳಿದ ವರ್ಗಗಳ ಉಪಪಂಗಡಗಳೂ ಮೀಸಲಾತಿಯ ಲಾಭ ಪಡೆದುಕೊಳ್ಳಬೇಕೆನ್ನುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಆಯೋಗ ರಚನೆ ಪ್ರಸ್ತಾವಕ್ಕೆ ರಾಷ್ಟ್ರಪತಿ ಕೋವಿಂದ್‌ ಸಹಿ ಮಾಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲದೆ ಬಿಜೆಪಿ ಆಡಳಿತ ವಿರುವ ಸರಕಾರಗಳಲ್ಲಿ ಆಯೋಗ ಅಧ್ಯಯನ ನಡೆಸಿ ಪಟ್ಟಿ ಸಿದ್ಧಪಡಿಸಲಿದೆ.

Advertisement

ದಿಲ್ಲಿ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಅವರು ಆಯೋಗದ ಮುಖ್ಯಸ್ಥೆ. ಒಬಿಸಿ ವ್ಯಾಪ್ತಿಯ ಲ್ಲಿನ ಉಪಪಂಗಡಗಳನ್ನು ಗುರುತಿಸಿ ಅವ ರಿಗೂ ಮೀಸಲಾತಿ ಲಾಭ ದೊರಕುವಂತೆ ಮಾಡುವುದು ಆಯೋಗ ರಚನೆ ಹಿಂದಿನ ಉದ್ದೇಶ. ವೈಜ್ಞಾ ನಿಕ ಆಧಾರದ ಮೇಲೆ ಉಪಪಂಗಡಗಳನ್ನು ಗುರುತಿಸುವುದು ಆಯೋಗದ ಮುಂದಿನ ಸವಾಲಾಗಿದ್ದು, 12 ವಾರಗಳ ಅವಧಿಯಲ್ಲಿ ಈ ಪಟ್ಟಿಯನ್ನು ಸರಕಾರಕ್ಕೆ ಒಪ್ಪಿಸಬೇಕಿದೆ.

ಸದ್ಯ ಒಬಿಸಿ ಮೀಸಲಾತಿ ಲಾಭಗಳನ್ನು ಯಾದವರೇ ಹೆಚ್ಚು ಪಡೆದುಕೊಳ್ಳುತ್ತಿರುವ ಪರಿಸ್ಥಿತಿ ಇದ್ದು, ಇದರಿಂದ ನಾವು ವಂಚನೆಗೆ ಒಳಗಾಗುತ್ತಿದ್ದೇವೆ ಎಂದು ಉಪಪಂಗಡಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next