Advertisement

ಮರಾಠರಿಗೆ OBC ಸೌಲಭ್ಯ: ಉಪವಾಸ ನಿಲ್ಲಿಸಿದ ಜಾರಂಗೆ

12:58 AM Jan 28, 2024 | Team Udayavani |

ಮುಂಬಯಿ: “ಮರಾಠ ಸಮುದಾಯಕ್ಕೆ ಮೀಸಲು ಸಿಗುವವರೆಗೆ, ಒಬಿಸಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಸಮುದಾಯಕ್ಕೆ ಕಲ್ಪಿಸಲಾಗುವುದು’ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಶನಿವಾರ ಭರವಸೆ ನೀಡಿದ್ದಾರೆ. ಇದಾದ ಬಳಿಕ ಮೀಸಲು ಹೋರಾಟಗಾರ ಮನೋಜ್‌ ಜಾರಂಗೆ ತಮ್ಮ ಅನಿ­ರ್ದಿಷ್ಟಾವಧಿ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ.

Advertisement

ಮೀಸಲು ಕಲ್ಪಿಸುವಂತೆ ಆಗ್ರಹಿಸಿ ಸಾವಿರಾರು ಬೆಂಬಲಿಗರೊಂದಿಗೆ ಮನೋಜ್‌ ಜಾರಂಗೆ ಜಲಾ° ಜಿಲ್ಲೆಯ ಅಂತರವಾಲಿ ಗ್ರಾಮದಿಂದ ಮುಂಬಯಿ ವರೆಗೆ ಜಾಥಾ ಮೂಲಕ ಬಂದು ಶುಕ್ರವಾರದಿಂದ ನವೀ ಮುಂಬಯಿಯಲ್ಲಿ ಉಪವಾಸ ನಡೆಸುತ್ತಿದ್ದರು.

ಮಹಾರಾಷ್ಟ್ರ ಸರಕಾರದ ನಿಯೋಗವು ಶುಕ್ರವಾರ ರಾತ್ರಿಯೇ ಧರಣಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮನೋಜ್‌ ಜಾರಂಗೆ ಅವರಿಗೆ ಸತ್ಯಾಗ್ರಹ ವಾಪಸು ಪಡೆಯುವಂತೆ ಮನವಿ ಮಾಡಿತು.
ಶನಿವಾರ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಭೇಟಿ ನೀಡಿ, ಶೀಘ್ರದಲ್ಲೇ ಮರಾಠ ಸಮುದಾಯಕ್ಕೆ ಕುಣುಬಿ ಪ್ರಮಾಣಪತ್ರ ನೀಡುವ ಬಗ್ಗೆ ಆದೇಶ ಹೊರಡಿಸಿದ ಬಳಿಕ ಮನೋಜ್‌ ಜಾರಂಗೆ ಅವರು ಉಪವಾಸ ಸತ್ಯಾಗ್ರಹ ಹಿಂಪಡೆದರು.

 

Advertisement

Udayavani is now on Telegram. Click here to join our channel and stay updated with the latest news.

Next