Advertisement

ಪರ್ರಿಕರ್‌ ರಾಜ್ಯಸಭಾ ಸ್ಥಾನ ಯಾರಿಗೂ ಬೇಡ?

06:40 AM Dec 27, 2017 | Team Udayavani |

ಲಕ್ನೋ: ಗೋವಾ ಸಿಎಂ ಮನೋಹರ್‌ ಪರ್ರಿಕರ್‌ ಅವರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯಸಭಾ ಸದಸ್ಯ ಸ್ಥಾನವನ್ನು ತುಂಬಲು ಯಾವ ಬಿಜೆಪಿ ನಾಯಕರೂ ಮುಂದೆ ಬರುತ್ತಿಲ್ಲವೆಂಬ ಕುತೂಹಲ ಮಾಹಿತಿಯನ್ನು “ನ್ಯೂಸ್‌ 18′ ಹೊರಹಾಕಿದೆ. ಪರ್ರಿಕರ್‌, 2014ರಲ್ಲಿ ರಕ್ಷಣಾ ಸಚಿವರಾದಾಗ ಅವರನ್ನು ರಾಜ್ಯಸಭೆಗೆ ಆರಿಸಲಾಗಿತ್ತು. ಪುನಃ ಗೋವಾ ಸಿಎಂ ಆದಾಗ ರಾಜ್ಯಸಭಾ ಸ್ಥಾನವೂ ಖಾಲಿಯಾಯಿತು.

Advertisement

ಇದೀಗ, ಅವರಿಂದ ತೆರವಾಗಿರುವ ಸ್ಥಾನ ತುಂಬಲು ಯಾರೂ ಮುಂದೆ ಬರುತ್ತಿಲ್ಲ. ಅವರ ಸದಸ್ಯತ್ವ ಅವಧಿ 2020ರ ನವೆಂಬರ್‌ನಲ್ಲಿ ಕೊನೆಗೊಳ್ಳಲಿರುವುದೇ ಅದಕ್ಕೆ ಕಾರಣ. ಉ.ಪ್ರ.ದಿಂದ ಮಾರ್ಚ್‌ನಲ್ಲಿ 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಆಯ್ಕೆಯಾಗುವವರು 6 ವರ್ಷ ಅಧಿಕಾರದಲ್ಲಿರಬಹುದು. ಆದರೆ, ಪರ್ರಿಕರ್‌ ಸ್ಥಾನಕ್ಕೆ ಹೋದರೆ ಬರೀ 2 ವರ್ಷ ಅಧಿಕಾರ! ಹಾಗಾಗಿ ಯಾರಿಗೂ ಆಸಕ್ತಿಯಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next