Advertisement

ಭಾನುವಳ್ಳಿಯ ನವಗ್ರಹ ತಂಡ ಕ್ರಿಕೆಟ್‌ ಚಾಂಪಿಯನ್‌

02:53 PM Jun 04, 2018 | Team Udayavani |

ಹರಿಹರ: ತಾಲೂಕಿನ ಎಕ್ಕೆಗೊಂದಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಕ್ರಿಕೆಟರ್ ವತಿಯಿಂದ ಸತೀಶ್‌ ಸ್ಮರಣಾರ್ಥ ಮೇ 29ರಿಂದ 31ರವರೆಗೆ ಆಯೋಜಿಸಿದ್ದ ಟೆನಿಸ್‌ ಬಾಲ್‌ ಟೂರ್ನಮೆಂಟ್‌ನಲ್ಲಿ ಭಾನುವಳ್ಳಿಯ ನವಗ್ರಹ ತಂಡ ಮತ್ತು ಶ್ರೀರಾಮ್‌ ತಂಡ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದಿವೆ.

Advertisement

ನವಗ್ರಹ ತಂಡದ ಕ್ರೀಡಾಪಟು ಕೆಂಚ ಮ್ಯಾನ್‌ ಆಫ್‌ ದಿ ಮ್ಯಾಚ್‌, ಮ್ಯಾನ್‌ ಆಫ್‌ ದಿ ಸಿರೀಸ್‌ ಹಾಗೂ ಬೆಸ್ಟ್‌ ಬ್ಯಾಟ್ಸ್‌ಮನ್‌ ಆಗಿ ರೇವು ರಡ್ಡಿ ಹೊರಹೊಮ್ಮಿದ್ದಾರೆ. ಪಂದ್ಯಾವಳಿಯಲ್ಲಿ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ನಾಗರಾಜಪ್ಪ, ಗ್ರಾಪಂ ಕಾರ್ಯದರ್ಶಿ ಪರಮೇಶ್ವರಪ್ಪ, ಶಿವಣ್ಣ, ಸುರೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next