Advertisement

Kalidas Samman; ಗಂಜೀಫಾ ರಘುಪತಿ ಭಟ್ಟರಿಗೆ ರಾಷ್ಟ್ರೀಯ ಕಾಳಿದಾಸ್‌ ಸಮ್ಮಾನ್‌

11:19 PM Oct 19, 2024 | Team Udayavani |

ಬೆಂಗಳೂರು: ಉಡುಪಿ ಮೂಲದ ಹೆಸರಾಂತ ಕಲಾವಿದ ಗಂಜೀಫಾ ರಘುಪತಿ ಭಟ್ಟರಿಗೆ ಮಧ್ಯಪ್ರದೇಶ ಸರಕಾರ ನೀಡುವ 2023ನೇ ಸಾಲಿನ ರಾಷ್ಟ್ರೀಯ “ಕಾಳಿದಾಸ್‌ ಸಮ್ಮಾನ್‌’ ಪ್ರಶಸ್ತಿ ಲಭಿಸಿದೆ. ಜೀವಿತಾವಧಿಯ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗುತ್ತಿದ್ದು, ಭಟ್ಟರ ಭಾರತೀಯ ಶಾಸ್ತ್ರೀಯ ಚಿತ್ರರಚನೆ ಸಾಧನೆಯನ್ನು ಗುರುತಿಸಿ ಗೌರವಿಸಲಾಗಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದನ್ನು ಒಳಗೊಂಡಿದ್ದು, ನ. 12ರಂದು ಉಜ್ಜಯಿನಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಳಿವಿನಂಚಿನಲ್ಲಿದ್ದ ಕರ್ನಾಟಕದ ಗಂಜೀಫಾ ಚಿತ್ರಕಲೆಯನ್ನು ಮುನ್ನೆಲೆಗೆ ತರುವಲ್ಲಿ ಇವರ ಪಾತ್ರ ಮಹತ್ತರವಾದುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next