Advertisement

‘ನರರಾಕ್ಷಸ’ನ ಸುತ್ತ ಹೊಸಬರ ಚಿತ್ತ

12:21 PM Apr 08, 2022 | Team Udayavani |

“ನಾನೇ ನರರಾಕ್ಷಸ’. ಹೀಗೊಂದು ಸಿನಿಮಾ ಸದ್ದಿಲ್ಲದೇ ಆರಂಭವಾಗಿ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೈಸೂರಿನ ರಾಜ್‌ ಮನೀಶ್‌ ಈ ಚಿತ್ರದ ನಾಯಕ. ನಟನೆಯ ಜೊತೆಗೆ ನಿರ್ದೇಶನ ಕೂಡಾ ಇವರದ್ದೇ. ಈ ಚಿತ್ರವನ್ನು ಇವರ ತಾಯಿ ಬಿ.ರಾಧಾ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದೆ.

Advertisement

ಚಿತ್ರದ ಬಗ್ಗೆ ಮಾತನಾಡುವ ರಾಜ್‌ ಮನೀಶ್‌, “ನಮ್ಮ ಹೋಮ್‌ ಬ್ಯಾನರ್‌ನಲ್ಲಿ ನಮ್ಮ ತಾಯಿಯವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಾನು ಎರಡನೇ ಬಾರಿಗೆ ನಾಯಕನಾಗಿ ನಟಿಸುವ ಜೊತೆಗೆ ಮೊದಲ ಬಾರಿಗೆ ನಿರ್ದೇಶನ ಕೂಡಾ ಮಾಡಿದ್ದೇನೆ. ಪ್ರತಿಯೊಬ್ಬ ಮನಷ್ಯನ ಒಳಗೂ ಒಬ್ಬ ರಾಕ್ಷಸನಿರುತ್ತಾನೆ. ಚಿತ್ರದಲ್ಲಿರುವ ಎಲ್ಲ ಪಾತ್ರಗಳೂ ಸಮಯ ಬಂದಾಗ ಹೇಗೆ ರಾಕ್ಷಸರಾಗಿ ಬದಲಾಗುತ್ತಾರೆ ಎನ್ನುವುದೇ ಈ ಕಥೆಯ ತಿರುಳು. ನಮ್ಮ ಸಿನಿಮಾ ವೀಕ್ಷಿಸುವಾಗ ಮುಂದೆ ಹೀಗೇ ನಡೆಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಚಿತ್ರದ ಕೊನೆಯವರೆಗೂ ಕುತೂಹಲ ಉಳಿಸಿಕೊಂಡಿದ್ದೇವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next