Advertisement

ನಮನ ಫ್ರೆಂಡ್ಸ್‌ ಮುಂಬಯಿ ವಾರ್ಷಿಕೋತ್ಸವ: ಸಾಧಕರಿಗೆ ಸಮ್ಮಾನ

01:05 PM Feb 05, 2019 | |

 ಮುಂಬಯಿ: ಗಣರಾಜ್ಯೋತ್ಸವ ದಿನವಾದ ಜ. 26ರಂದು  ಸಾಂತಾಕ್ರೂಜ್‌ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ರಚಿತ ಸ್ವಾತಂತ್ರÂ ಹೋರಾಟಗಾರ ಬಡ ಎರ್ಮಾಳ್‌ ಗರಡಿಮನೆ ಸ್ವರ್ಗೀಯ ರಾಮ ಬಿ. ಸನಿಲ್‌ ಸ್ಮರಣಾರ್ಥ ವೇದಿಕೆಯಲ್ಲಿ ನಡೆದ ನಮನ ಫ್ರೆಂಡ್ಸ್‌ ಮುಂಬಯಿ ಇದರ 14ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಾಧಕರನ್ನು ಗೌರವಿಸಲಾಯಿತು.

Advertisement

ಬಂಟರ ಸಂಘ ಮುಂಬಯಿ ಇದರ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಸಭಾಧ್ಯಕ್ಷತೆಯಲ್ಲಿ ನಡೆಸಿದ ಸಮಾರಂಭದಲ್ಲಿ ತೆರೆಮರೆಯ ಸಹೃದಯಿ ಸಮಾಜ ಸೇವಕ, ನಮನ ಫ್ರೆಂಡ್ಸ್‌ ಮುಂಬಯಿ ಇದರ ಸಂಸ್ಥಾಪಕ ಪ್ರಭಾಕರ ಬೆಳುವಾಯಿ, ಶೋಧನಾ ಪ್ರಭಾಕರ್‌ ಮತ್ತು ಮಾ| ಪ್ರಥುÂಶ್‌ ಪಿ. ಬೆಳುವಾಯಿ ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಅಪ್ಪಾಜಿಬೀಡು ರಮೇಶ್‌ ಗುರುಸ್ವಾಮಿ ಮತ್ತು ಸಂಗೀತ ವಿದ್ವಾಂಸ ಪ್ರವೀಣ್‌ ಹೀರಾ ಇವರಿಗೆ ಗುರುವಂದನೆಗೈಯಲಾಯಿತು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ್‌ ಎಸ್‌.ಪೂಜಾರಿ, ರಮ್ಯಾ ಉದಯ ಶೆಟ್ಟಿ, ವಾಸ್ತು ಪಂಡಿತ ಅಶೋಕ್‌ ಪುರೋಹಿತ್‌, ಕೃಷ್ಣ ಬಿ. ಶೆಟ್ಟಿ ಅಂಧೇರಿ, ನವೀನ್‌ ಪಡುಇನ್ನಾ, ಹೆಸರಾಂತ ಕೋರಿಯೋಗ್ರಾಫರ್‌ ಸನ್ನಿಧ್‌ ಪೂಜಾರಿ ಇವರನ್ನು ಅತಿಥಿ ಗಳು  ಫಲಪುಷ್ಪ, ಶಾಲು, ಸ್ಮರಣಿಕೆ ನೀಡಿ ಸಮ್ಮಾನಿಸಿದರು ಹಾಗೂ  ಜಯ
ಶೀಲ ಸುವರ್ಣ ಮತ್ತು ಚೇತನ್‌ರಾವುತ್‌ ಅವರನ್ನು ಸಮ್ಮಾನಿ ಸಲಾಯಿತು.

ವೇದಿಕೆಯಲ್ಲಿ ವಾಸ್ತುತಜ್ಞ  ಪಂಡಿತ್‌ ನವೀನ್‌ಚಂದ್ರ ಆರ್‌. ಸನಿಲ್‌, ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌, ಶಿವಪ್ರಸಾದ್‌ ಪೂಜಾರಿ ಪುತ್ತೂರು, ರವೀಂದ್ರ ಎಸ್‌. ಕೋಟ್ಯಾನ್‌, ಸಂತೋಷ್‌ ಕೆ. ಪೂಜಾರಿ, ನರೇಶ್‌ ಕೆ. ಪೂಜಾರಿ, ಅಶೋಕ್‌ ಪಕ್ಕಳ, ಜ್ಯೋತಿ ಅಶೋಕ್‌ ಶೆಟ್ಟಿ, ಹರೀಶ್‌ ಕೋಟ್ಯಾನ್‌ ಪಡುಇನ್ನಾ,  ಪ್ರಮೋದ್‌ ಕರ್ಕೇರ ಅಡ್ವೆ, ಪ್ರಕಾಶ್‌ ಮೂಡಬಿದಿರೆ, ಕಿರಣ್‌ ಪೂಜಾರಿ ವಾಶಿ, ಸುರೇಂದ್ರ ಕುಮಾರ್‌ ಮಾರ್ನಾಡ್‌, ಸತೀಶ್‌ ಎರ್ಮಾಳ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next