Advertisement

ಸೊಗಡು-ಬಸವರಾಜು ರಾಜಿಗೆ ಪ್ರಯತ್ನ

09:53 AM Jan 22, 2018 | Team Udayavani |

ತುಮಕೂರು: ಜಿಲ್ಲಾ ಬಿಜೆಪಿಯ ಸೊಗಡು ಶಿವಣ್ಣ ಮತ್ತು ಜಿ.ಎಸ್‌.ಬಸವರಾಜು ಬಣಗಳ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ರಾಜ್ಯ ಉಸ್ತುವಾರಿ ಯಾಗಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಭಾನುವಾರ ಪ್ರಯತ್ನ ನಡೆಸಿದರು. 

Advertisement

ಕೋರ್‌ ಕಮಿಟಿ ಸಭೆಗೆ ಬರದ ಶಿವಣ್ಣ , ಬಳಿಕ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಒಗ್ಗಟ್ಟಿನ ಜಪ ಪಟಿಸಿದರು. ಜಿಲ್ಲಾ
ಕಾರ್ಯಕಾರಿಣಿ ಸಭೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ್ದ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ನಗರದ ಪ್ರವಾಸಿ ಮಂದಿರಕ್ಕೆ ಮಾಜಿ ಸಚಿವ ಎಸ್‌.ಶಿವಣ್ಣ, ಶಾಸಕ ಬಿ.ಸುರೇಶಗೌಡ ಹಾಗೂ ಮಾಜಿ ಸಂಸದ ಜಿ.ಎಸ್‌.ಬಸವರಾಜು, ಜಿಲ್ಲಾಧ್ಯಕ್ಷ ಜೋತಿಗಣೇಶ್‌ ಅವರನ್ನು ಕರೆಸಿಕೊಂಡು ಭಿನ್ನಾಭಿಪ್ರಾಯ ಬಗೆಹರಿಸಲು ಯತ್ನಿಸಿದರು. ಪಕ್ಷದಲ್ಲಿರುವ ಭಿನ್ನಾಭಿಪ್ರಾಯ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದಂತೆ ತಾಕೀತು ಮಾಡಿದರು. ಯಾರಿಗೆ ಟಿಕೇಟ್‌ ನೀಡಬೇಕು ಎನ್ನುವ ಬಗ್ಗೆ ಸಮೀಕ್ಷೆ ನಡೆಸಿ ಟಿಕೇಟ್‌ ನೀಡಲಾಗುವುದು. ಯಾರಿಗೆ ಟಿಕೇಟ್‌ ನೀಡಿದರೂ ಪಕ್ಷದ ಗೆಲುವಿಗೆ ಶ್ರಮಿಸಿ ಎಂದು ಖಡಕ್‌ ಸೂಚನೆ ನೀಡಿದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next