Advertisement

ಕತ್ತು ಸೀಳಿ ಯುವಕನ ಕೊಲೆ; ಆರೋಪಿ ಶರಣು

01:00 PM Apr 24, 2017 | Harsha Rao |

ಕಾಸರಗೋಡು: ಬೆಳ್ಳೂರು ನಿವಾಸಿ ಯುವಕನನ್ನು ಮಂಜೇರಿಯಲ್ಲಿ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ. ಪ್ರಕರಣದ ಆರೋಪಿ ಮೊಗ್ರಾಲ್‌ ಕೊಪ್ಪಳ ನಿವಾಸಿ ಕಾಸರಗೋಡು ವಿದ್ಯಾನಗರ ಪೊಲೀಸರ ಮುಂದೆ ಶರಣಾಗಿದ್ದಾನೆ.
ಬೆಳ್ಳೂರು ಪಳ್ಳಪ್ಪಾಡಿ ಬಳಿಯ ಎಡೋಣಿ ನಿವಾಸಿ ಅಬ್ದುಲ್ಲ ಕುಂಞಿ ಹಾಜಿ ಅವರ ಪುತ್ರ ಆಶಿಕ್‌(22)ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ. ಕೊಲೆ ಆರೋಪಿ ಮೊಗ್ರಾಲ್‌ ಕೊಪ್ಪಳ ನಿವಾಸಿ ನವಾಝ್ (21) ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಶರಣಾಗಿದ್ದಾನೆ.

Advertisement

ಎ. 22ರಂದು ರಾತ್ರಿ 9.30ಕ್ಕೆ ಕೊಲೆ ಘಟನೆ ನಡೆದಿದೆ. ಆಶಿಕ್‌ ಹಾಗೂ ಸ್ನೇಹಿತರಾದ ನಾಲ್ಕು ಮಂದಿ ಮಲಪ್ಪುರಂನ ಮಂಜೇರಿ ಬಳಿ ಕಾರಾಪರಂಬನಲ್ಲಿ ಚಪಾತಿ ಸಹಿತ ವಿವಿಧ ತಿಂಡಿಗಳನ್ನು ತಯಾರಿಸಿ ವಿತರಿಸುವ ಕೆಲಸ ನಿರ್ವಹಿಸುತ್ತಿದ್ದರು. ಆಶಿಕ್‌ ಒಂದು ವರ್ಷದಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನವಾಸ್‌ ಇತ್ತೀಚೆಗಷ್ಟೇ ಅಲ್ಲಿ ಕೆಲಸಕ್ಕ ಸೇರಿದ್ದನೆನ್ನಲಾಗಿದೆ. ಶನಿವಾರ ಬೆಳಗ್ಗೆ ಆಶಿಕ್‌ ಹಾಗೂ  ನವಾಝ್ ಮಧ್ಯೆ ವಾಗ್ವಾದ ನಡೆದಿತ್ತು. ಈ ವೇಳೆ ಜತೆಗಿದ್ದವರು ಮಾತುಕತೆ ನಡೆಸಿ ಸಮಾಧಾನಪಡಿಸಿದ್ದರು. ರಾತ್ರಿ ಮತ್ತು 9.30ಕ್ಕೆ ಇವರ ಮಧ್ಯೆ ಕ್ವಾರ್ಟರ್ಸ್‌ ನಲ್ಲಿ ವಾಗ್ವಾದ ನಡೆದಿದ್ದು, ಇದೇ ವೇಳೆ  ನವಾಝ್, ಆಶಿಕ್‌ ಅವರ ಕತ್ತನ್ನು ಸೀಳಿ ಗಂಭೀರ ಗಾಯಗೊಳಿಸಿದ್ದನೆನ್ನಲಾಗಿದೆ. 

ಬೊಬ್ಬೆ ಕೇಳಿ ಸಮೀಪದ ಕ್ವಾರ್ಟರ್ಸ್‌ ನಲ್ಲಿದ್ದವರು ಬಂದಾಗ ಆಶಿಕ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಕೂಡಲೇ ಆಶಿಕ್‌ ಅವರನ್ನು ಮಂಜೇರಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಮಂಜೇರಿ ವೈದ್ಯಕೀಯ ಕಾಲೇàಜು ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಘಟನೆ ನಡೆದ ತತ್‌ಕ್ಷಣ  ನವಾಝ್ ಸ್ಕೂಟರ್‌ನಲ್ಲಿ ಪರಾರಿಯಾಗಿ ಕಾಸರಗೋಡಿಗೆ ಬಂದು ಬಳಿಕ ಪೊಲೀಸ‌ಧಿರಿಗೆ ಶರಣಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next