Advertisement

ಶಾಸಕರಿಂದ ತಾಯಂದಿರ ದಿನಾಚರಣೆ: ಪಾದಪೂಜೆ

08:54 AM May 11, 2020 | Suhan S |

ಮೈಸೂರು: ಅಮ್ಮಂದಿರ ದಿನಾಚರಣೆ ಪ್ರಯುಕ್ತ ಶಾಸಕ ಎಸ್‌.ಎ.ರಾಮದಾಸ್‌ ತಮ್ಮ ಕ್ಷೇತ್ರದಲ್ಲಿನ ಹಿರಿಯರಿಗೆ ಪಾದ ಪೂಜೆ ಮಾಡುವ ಮೂಲಕ ವಿಶೇಷವಾಗಿ ಅಮ್ಮಂದಿರ ದಿನವನ್ನು ಆಚರಿಸಿದರು.

Advertisement

ಈ ಸಂದರ್ಭ ಮಾತನಾಡಿ, ಅಮ್ಮಂದಿರ ದಿನ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ನಮ್ಮ ದೇಶದಲ್ಲಿ ಭೂಮಿಯನ್ನು ಮಾತೃಭೂಮಿ ಎಂದು, ಹಸುವನ್ನು ಗೋಮಾತೆ ಎಂದು ಹೀಗೆ ಪ್ರಮುಖವಾದು ದಕ್ಕೆಲ್ಲಾ ತಾಯಿಗೆ ಹೋಲಿಸಿ ಪೂಜಿಸಲಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ಅಮ್ಮನ ಪಾತ್ರ ಬಹಳ ಪ್ರಮುಖವಾದದ್ದು. ಹಾಗೇ ನನ್ನ ಜೀವನದಲ್ಲೂ ತಾಯಿ ದೇವರಿಗಿಂತಲು ಹೆಚ್ಚು ಎಂದು ಹೇಳಿದರು.

ಕೆ.ಆರ್‌ ಕ್ಷೇತ್ರ ವ್ಯಾಪ್ತಿಯ ಸಾವಿತ್ರಿ ಪ್ರಭಾಕರ್‌, ಅನಂತ ಲಕ್ಷ್ಮೀ, ಡಾ.ಇಂದಿರಾ ನರಸಿಂಹನ್‌, ಸವಿತಾ ಅವರ ಪಾದ ತೊಳೆದು ಹಾರ ಶಾಲು ಹಾಕಿ ಗೌರವ ಸಮರ್ಪಿಸಿದರು. ಕೆ.ಆರ್‌.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು, ಬಿಜೆಪಿ ಮುಖಂಡರಾದ ನೂರ್‌ ಫಾತಿಮಾ, ವಿದ್ಯಾ ಅರಸ್‌, ಎಂ. ಆರ್‌.ಬಾಲಕೃಷ್ಣ, ಓಂ ಶ್ರೀನಿವಾಸ್‌, ನಾಗೇಂದ್ರ ಕುಮಾರ್‌ ಜೆ, ಸಂತೋಷ್‌, ಶಿವಪ್ಪ, ಅನ್ನಪೂರ್ಣ ಆರ್‌, ರೇವತಿ, ವಿ.ಎನ್‌. ಕೃಷ್ಣ, ಹೇಮಂತ್‌ ಕುಮಾರ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next