Advertisement

ಕೋವಿಡ್ 19 ಮುಂಜಾಗ್ರತೆ: ಮೂಡುಬಿದಿರೆ ಶುಕ್ರವಾರದ ಸಂತೆ ಮುಂದೂಡಿಕೆ

10:28 AM Mar 20, 2020 | keerthan |

ಮೂಡುಬಿದಿರೆ: ಕೋವಿಡ್ 19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಎಲ್ಲೂ ವಾರದ ಸಂತೆಗಳನ್ನು ನಡೆಸಬಾರದು ಎಂದು ಜಿಲ್ಲಾಧಿಕಾರಿ ಆದೇಶ ಮಾಡಿರುವ ಕಾರಣ ಮೂಡುಬಿದಿರೆಯ ಪ್ರಸಿದ್ದ ಶುಕ್ರವಾರ ಸಂತೆ ಮುಂದೂಡಲ್ಪಟ್ಟಿದೆ.

Advertisement

ನಗರದ ಸ್ವರಾಜ್ಯ ಮೈದಾನದಲ್ಲಿನ ತಾತ್ಕಾಲಿಕ ಮಾರುಕಟ್ಟೆಯಲ್ಲಿ ವಾರದ ಸಂತೆ ನಡೆಸದಂತೆ ಪುರಸಭೆ ಇಂದು ನಿರ್ಬಂಧ ವಿಧಿಸಿತು. ಪೊಲೀಸ್ ಸಹಾಯದಿಂದ ವ್ಯಾಪಾರಕ್ಕೆ ಬಂದಿದ್ದ ವ್ಯಾಪಾರಿಗಳನ್ನು ಸಂತೆ ಮಾಡದಂತೆ ತಡೆಯಲಾಯಿತು.

ಮಾರುಕಟ್ಟೆಯಲ್ಲಿರುವ ಅಂಗಡಿಗಳ ಹೊರತಾಗಿ ಇತರೆ ತಲೆ ಹೊರೆ ಅಥವಾ ವಾಹನ ಮೂಲಕ ತರಕಾರಿ ಹಣ್ಣು ಹಂಪಲು, ದಿನಬಳಕೆ ಸಾಮಾಗ್ರಿ ವ್ಯಾಪರಸ್ಥರು ಮಳಿಗೆಗಳನ್ನು ಬಂದ್ ಮಾಡಲಾಯಿತು.

ವಾಹನಗಳಲ್ಲಿ ಬಂದಿದ್ದ ಕಲ್ಲಂಗಡಿ ಸಹಿತ ಹಣ್ಣು ವ್ಯಾಪಾರಿಗಳು, ಒಣ ಮೀನು ವ್ಯಾಪಾರಿಗಳಿಗೂ ಅನುಮತಿ ನೀಡಲಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next