Advertisement

Modi ಟೀಕೆಗಳನ್ನು ಸಹಿಸುವುದಿಲ್ಲ,ಇತರರ ವಿರುದ್ಧ ಏನನ್ನೂ ಮಾತನಾಡುತ್ತಾರೆ: ಪವಾರ್

07:48 PM May 11, 2024 | Team Udayavani |

ಬೀಡ್ (ಮಹಾರಾಷ್ಟ್ರ): ಪ್ರಧಾನಿ ನರೇಂದ್ರ ಮೋದಿ ಟೀಕೆಗಳನ್ನು ಸಹಿಸುವುದಿಲ್ಲ ಆದರೆ ಇತರರ ವಿರುದ್ಧ ಏನನ್ನೂ ಮಾತನಾಡುತ್ತಾರೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್ ಶನಿವಾರ ಆರೋಪಿಸಿದ್ದಾರೆ.

Advertisement

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಅಜಿತ್ ಪವಾರ್ ಅವರೊಂದಿಗೆ ಕೈಜೋಡಿಸುವಂತೆ ಪ್ರಧಾನಿ ಮೋದಿ, ಎನ್‌ಸಿಪಿ (ಎಸ್‌ಪಿ) ಕಾರ್ಯಕರ್ತರಿಗೆ ಸಲಹೆ ನೀಡಿದ ಒಂದು ದಿನದ ನಂತರ ಹಿರಿಯ ನಾಯಕ ತಿರುಗೇಟು ನೀಡಿದ್ದಾರೆ.

ಎನ್‌ಸಿಪಿ (ಶರದ್ಚಂದ್ರ ಪವಾರ್) ಪಕ್ಷದ ಬೃಹತ್ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿ ‘ಮೋದಿ ಅವರು ಮುಸ್ಲಿಮರನ್ನು ಬಹಿರಂಗವಾಗಿ ಗುರಿಯಾಗಿಸಿದ್ದಾರೆ. ಅವರು ಪ್ರಧಾನಿಯಾಗಿದ್ದರೂ ಅವರು ಎಲ್ಲಾ ಜಾತಿಗಳು ಮತ್ತು ಧರ್ಮಗಳ ನಾಗರಿಕರ ಪರವಾಗಿ ನಿಲ್ಲಬೇಕು. ಅವರು ಟೀಕೆಗಳನ್ನು ಸಹಿಸುವುದಿಲ್ಲ ಆದರೆ ಅವರು ಇತರರ ವಿರುದ್ಧ ಏನು ಬೇಕಾದರೂ ಮಾತನಾಡುತ್ತಾರೆ. ಅವರು ಮುಸ್ಲಿಮರ ಮೇಲಿನ ದ್ವೇಷ ಗೋಚರಿಸುತ್ತಿದೆ, ”ಎಂದು ಪವಾರ್ ಹೇಳಿದರು.

”ಜನರು ಈ ಚುನಾವಣೆಯಲ್ಲಿ ಮಹಿಳಾ ಮತ್ತು ರೈತ ವಿರೋಧಿ ಮೋದಿಗೆ ಸಹಾಯವಾಗುವ ಯಾವುದನ್ನೂ ಮಾಡಬಾರದು” ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next