Advertisement

ಬೆಳಗಾವಿಯ ಸುವರ್ಣಸೌಧವನ್ನು ಕೋವಿಡ್ ಕೇರ್‌ಗೆ ಬಳಸಿಕೊಳ್ಳಿ: ಎಂಎಲ್ ಸಿ ವಿಶ್ವನಾಥ್

03:57 PM May 07, 2021 | Team Udayavani |

ಮೈಸೂರು: ಬೆಳಗಾವಿ ಶಾಸಕರ ಒತ್ತಾಯದಂತೆ ಸುವರ್ಣಸೌಧವನ್ನು ಕೋವಿಡ್ ಕೇರ್‌ಗೆ ಬಳಸಿಕೊಳ್ಳಿ. ಸುವರ್ಣ ಸೌಧದಲ್ಲಿ ಎರಡು ಸಾವಿರ ಬೆಡ್ ಹಾಕಬಹುದು. ತಾತ್ಕಾಲಿಕ ಬೆಡ್‌ಗಳ ವ್ಯವಸ್ಥೆ ಮಾಡಿ, ಅಗತ್ಯಬಿದ್ದರೆ ಮುಂದುವರಿಸಿ ಎಂದು ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿದರು.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಲಾಕ್‌ಡೌನ್ ಮಾಡುವ ಮುಖ್ಯಮಂತ್ರಿಗಖ ಹೇಳಿಕೆ ಸ್ವಾಗತಾರ್ಹ. ಸಿಎಂ ಹೇಳಿಕೆ ಸಂಪೂರ್ಣ ಜಾರಿಗೆ ತರಬೇಕು. ಭಾರತ ಇಂದು ವಿದೇಶದ ಮಾಧ್ಯಮಗಳ ಮುಂದೆ ಬೆತ್ತಲಾಗಿದೆ‌. ಕೇಂದ್ರ , ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿವೆ ಎಂದು ಟೀಕಿಸಿದರು.

ಖಾಸಗಿ ಆಸ್ಪತ್ರೆಗಳು ಯಾರ ನಿಯಂತ್ರಣದಲ್ಲಿಲ್ಲ.ಆಂಧ್ರ ಪ್ರದೇಶ, ತೆಲಂಗಾಣ ಮಾದರಿಯಲ್ಲಿ ಕೋವಿಡ್ ಚಿಕಿತ್ಸೆ ಕೊಡಬೇಕು. ಸರ್ಕಾರವೇ ಚಿಕಿತ್ಸಾ ದರ ನಿಗದಿ ಮಾಡಬೇಕು. ಸಿಎಂ ಅವರು ಧೈರ್ಯವಾಗಿ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.

ಸಿಎಂಗೆ ಖಂಡತುಂಡವಾಗಿ ಅಧಿಕಾರ ನಡೆಸಿ ಅಂತ ಹೇಳಿದ್ದೆ ತಪ್ಪಾ? ನಾನೊಬ್ಬ ವಿಧುರನಾಗಿ ಧೃತರಾಷ್ರ್ಟನಿಗೆ ಬುದ್ದಿ ಹೇಳಿದ್ದೇನೆ. ಶಕುನಿಗಳನ್ನು, ಮೆಚ್ಚಿಸುವವರನ್ನ ನಂಬಬೇಡಿ. ಬಿಎಸ್‌ವೈ ಪುತ್ರ ವಾತ್ಸಲ್ಯ ಬಿಡಬೇಕು. ಅಂದು ವಿಧುರ ಕುರುಕ್ಷೇತ್ರ ಯುದ್ದ ಬೇಡ ಅಂತ ಹೇಳಿದ್ದ. ವಿಧುರನ ಸ್ಥಾನದಲ್ಲಿ‌ನಿಂತು ನಾನು ಮಾತನಾಡಿದ್ದೇನೆ ಎಂದು ವಿಶ್ವನಾಥ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next