Advertisement

ದಿನಸಿ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ದರ ಫಲಕ ಹಾಕಬೇಕು: ಸಚಿವ ಗೋಪಾಲಯ್ಯ

06:26 PM Apr 29, 2020 | keerthan |

ಹಾವೇರಿ: ಪಡಿತರ ಆಹಾರ ಧಾನ್ಯ ನೀಡಲು ಗ್ರಾಹಕರಿಂದ ಹಣ ಪಡೆದ ಹಾಗೂ ತೂಕ ಮೋಸ ಮಾಡಿದ ಆರೋಪಕ್ಕೆ ಸಂಬಂಧಿಸಿ ರಾಜ್ಯದಲ್ಲಿ 146 ಅಂಗಡಿಗಳನ್ನು ಅಮಾನತು ಮಾಡಲಾಗಿದೆ. ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ದಂಡ ಪಡೆಯಲಾಗಿದೆ. ಪಡಿತರ ಹಂಚದೆ ಗ್ರಾಹಕರಿಗೆ ಮೋಸ ಮಾಡಿದವರಿದ್ದರೆ ಅವರಿಗೆ ಮುಂದಿನ ತಿಂಗಳಿನ ಆಹಾರಧಾನ್ಯ ನೀಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ. ಗೋಪಾಲಯ್ಯ ಹೇಳಿದರು.

Advertisement

ಹಾವೇರಿಯಲ್ಲಿ ಮಾತನಾಡಿದ ಅವರು, ಪಡಿತರ ಆಹಾರ ವಿತರಣೆ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಗಮನಿಸಲು ಅಧಿಕಾರಿಗಳ 8-10 ತಂಡಗಳನ್ನು ಮಾಡಿ ಪರಿಶೀಲಿಸಲು ಸೂಚಿಸಲಾಗಿದೆ.  ದಿನಸಿ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ದರ ಫಲಕ ಹಾಕಬೇಕು. ದುಬಾರಿ ದರಕ್ಕೆ ಮಾರಾಟ ಆಗದಂತೆ ಕ್ರಮ ವಹಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಆಹಾರ ಧಾನ್ಯ ಪೂರೈಸಲು ಹಾಗೂ ಈ ಬಗ್ಗೆ ನ್ಯಾಯಬೆಲೆ ಅಂಗಡಿಗಳ ಎದುರು ಮಾಹಿತಿ ಫಲಕ ಹಾಕಲು ಸಹ ಆದೇಶಿಸಲಾಗಿದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next