Advertisement

ಅತ್ಯಾಚಾರ ಆರೋಪ ಪ್ರಕರಣ: ಸಚಿವ ಬಾಬುಷ್ ಮೊನ್ಸೆರೇಟ್ ಗೆ ತಾತ್ಕಾಲಿಕ ರಿಲೀಫ್ 

04:07 PM May 05, 2023 | Team Udayavani |

ಪಣಜಿ:  ಅತ್ಯಾಚಾರದಂತಹ ಗಂಭೀರ ಆರೋಪ ಎದುರಿಸುತ್ತಿರುವ ಗೋವಾ ರಾಜ್ಯ ಕಂದಾಯ ಸಚಿವ ಬಾಬುಷ್ ಮಾನ್ಸೆರೇಟ್ ಅವರಿಗೆ ವಿಶೇಷ ನ್ಯಾಯಾಲಯ ತಾತ್ಕಾಲಿಕ ರಿಲೀಫ್ ನೀಡಿದೆ.

Advertisement

ವಿಶೇಷ ನ್ಯಾಯಾಧೀಶ ಇರ್ಷಾದ್ ಆಗಾ ಅವರು ಪ್ರಕರಣದ ವಿಚಾರಣೆಗೆ ಶಾಶ್ವತ ಗೈರುಹಾಜರಿಗಾಗಿ ಸಲ್ಲಿಸಿದ ಅರ್ಜಿಯನ್ನು ಷರತ್ತುಬದ್ಧವಾಗಿ ಪುರಸ್ಕರಿಸಿದರು. ಬಾಬುಷ್ ಮೊನ್ಸೆರಾಟ್ ಅವರು ವಿಚಾರಣೆಗೆ ಗೈರು ಹಾಜರಾಗಲು ಅವಕಾಶ ನೀಡುವಾಗ, ನ್ಯಾಯಾಲಯವು ಅಗತ್ಯವೆಂದು ಭಾವಿಸಿದರೆ ಅವರು ವೈಯಕ್ತಿಕವಾಗಿ ಅಥವಾ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಬಹುದು ಎಂದು ಷರತ್ತು ವಿಧಿಸಲಾಗಿದೆ.

2016 ರಲ್ಲಿ, ಮೊನ್ಸೆರಾಟ್ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿತ್ತು. 16 ವರ್ಷದ ಬಾಲಕಿಯನ್ನು ಆಕೆಯ ತಾಯಿಯಿಂದ 50 ಲಕ್ಷ ರೂ.ಗೆ ಖರೀದಿಸಿ ನಂತರ ಆಕೆಗೆ ಅರವಳಿಕೆ ಮದ್ದು ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಪ್ರಕರಣದಲ್ಲಿ ಬಾಲಕಿಯ ತಾಯಿಯನ್ನೂ ಸಹ ಆರೋಪಿಯನ್ನಾಗಿ ಮಾಡಲಾಗಿದೆಪ್ರಕರಣದ ಮುಂದಿನ ವಿಚಾರಣೆಯನ್ನು ಈಗ ಜೂನ್ 5 ಕ್ಕೆ ನಿಗದಿಪಡಿಸಲಾಗಿದ್ದು, ಸಂತ್ರಸ್ತೆ ನಿರ್ಣಾಯಕ ಸಾಕ್ಷ್ಯವನ್ನು ನೀಡುವ ನಿರೀಕ್ಷೆಯಿದೆ ಎನ್ನಲಾಗಿದೆ. ಜೂನ್ 5 ರಿಂದ ವಾರದಲ್ಲಿ ಮೂರು ದಿನ ಸೋಮವಾರ, ಬುಧವಾರ ಮತ್ತು ಶುಕ್ರವಾರ ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next