Advertisement

ಪಾದಯಾತ್ರೆಗೆ ಬಂದವರಿಗೆ ನಮ್ಮ ಮೆಟ್ರೋದಲ್ಲಿ ಜಾಲಿ ರೈಡ್

03:38 PM Mar 04, 2022 | Team Udayavani |

ಬೆಂಗಳೂರು : ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದ ಸಮಾರೋಪದಲ್ಲಿ ಭಾಗವಹಿಸಲು ಬಂದವರಿಗೆ “ನಮ್ಮ ಮೆಟ್ರೋ’ ಜಾಲಿ ರೈಡ್‌ಗೆ ಅವಕಾಶ ದೊರಕಿತು! ಮಂಡ್ಯ, ಚಾಮರಾಜನಗರ ಸೇರಿದಂತೆ ಬೇರೆ ಬೇರೆ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸಮಾವೇಶಕ್ಕೆ ಆಗಮಿಸಿದ್ದರು. ಅವರೆಲ್ಲರಿಗೂ ಮೆಟ್ರೋದಲ್ಲಿ ಒಂದು ಟ್ರಿಪ್‌ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

Advertisement

ಕಾಗದದ ಟಿಕೆಟ್‌ಗಳನ್ನು ಈ ಪ್ರಯಾಣಿಕರಿಗೆ ವಿತರಿಸಲಾಗುತ್ತಿತ್ತು. ಒಬ್ಬರಿಗೆ ಒಂದು ಟ್ರಿಪ್‌ ಪ್ರಯಾಣಕ್ಕೆ ಅವಕಾಶ ಇತ್ತು. ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರಯಾಣಿಕರೊಬ್ಬರು ಈ ವೇಳೆ ಮಾತನಾಡಿ, “ನಾವು ಚಾಮರಾಜನಗರದಿಂದ ಬಂದಿದ್ದೇವೆ. ಇದುವರೆಗೆ ಮೆಟ್ರೋದಲ್ಲಿ ಓಡಾಡಿರಲಿಲ್ಲ. ಈಗ ಅದಕ್ಕೆ ಅವಕಾಶ ಸಿಕ್ಕಿದೆ. ಎಂ.ಜಿ. ರಸ್ತೆವರೆಗೆ ಮೆಟ್ರೋದಲ್ಲಿ ಹೋಗಿ ವಾಪಸ್‌ ಬಂದೆವು’ ಎಂದು ಹೇಳಿದರು.

ಇದನ್ನೂ ಓದಿ : Karnataka Budget 2022: ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ನಲ್ಲಿ ಬೆಂಗಳೂರಿಗೆ ಭರಪೂರ ಕೊಡುಗೆ

Advertisement

Udayavani is now on Telegram. Click here to join our channel and stay updated with the latest news.

Next