Advertisement

ಮೇಕೆದಾಟು ಪಾದಯಾತ್ರೆ ಮತ್ತೆ ಪ್ರಾರಂಭ: ರಾಮಲಿಂಗಾರೆಡ್ಡಿ

08:03 PM Feb 02, 2022 | Team Udayavani |

ಬೆಂಗಳೂರು:ಮೇಕೆದಾಟು ಯೋಜನೆಯ ಅನುಷ್ಟಾನಕ್ಕೆ ಒತ್ತಾಯಿಸಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತೆ ಆರಂಭಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಿ ಪಾದಯಾತ್ರೆ ನಿಂತಿತ್ತೋ ಅಲ್ಲಿಂದಲೇ ಮತ್ತೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು.

ಕೋವಿಡ್‌ ಕಡಿಮೆಯಾದ ನಂತರ ಪೊಲೀಸರು ಅನುಮತಿ ನೀಡುತ್ತಾರೆ. ಕಡಿಮೆಯಾದ ನಂತರ ಅವರು ಅನುಮತಿ ನೀಡಲೇಬೇಕಾಗುತ್ತದೆ ಎಂದು ಹೇಳಿದರು.

ಇದು ಎರಡೂವರೆ ಕೋಟಿ ಜನರ ಕುಡಿಯುವ ನೀರಿನ ವಿಚಾರವಾಗಿದೆ. ನಮ್ಮ ಒತ್ತಡಕ್ಕಾದರೂ ಕೇಂದ್ರದಿಂದ ಅನುಮತಿ ಪಡೆದು ಸರ್ಕಾರ ಯೋಜನೆ ಆರಂಭಿಸಿದರೆ ಅನುಕೂಲವಾಗಲಿದೆ. ಬೆಂಗಳೂರು ಸುತ್ತಮುತ್ತಲ ಹೊರವಲಯದಲ್ಲಿ ಅಭಿವೃದ್ಧಿ ಹೊಂದಿರುವ ಪ್ರದೇಶದ ಜನರಿಗೂ ಕುಡಿಯುವ ನೀರು ದೊರೆಯಲಿದೆ ಎಂದರು.

ಇದನ್ನೂ ಓದಿ:1008 ಕಿ. ಮೀ. ರಾಜ್ಯ ಹೆದ್ದಾರಿ ಮರು ಡಾಂಬರೀಕರಣ: ಡಿಪಿಆರ್ ಸಿದ್ಧ ಪಡಿಸಲು ಸಿಎಂ ಸೂಚನೆ

Advertisement

ಎರಡನೇ ಹಂತದ ಪಾದಯಾತ್ರೆ ಮಾರ್ಗದಲ್ಲಿ ಮಲ್ಲೇಶ್ವರಂ ಸೇರಬೇಕು ಎಂದು ಅಧ್ಯಕ್ಷರು ಹೇಳಿದ್ದಾರೆ. ಈ ಹಿಂದೆ ಚಾಮರಾಜಪೇಟೆ ಮೇಲೆ ಬರಲು ಸಾಧ್ಯವಾಗುತ್ತಿರಲಿಲ್ಲ. ಮೇಕ್ರಿ ಸರ್ಕಲ್‌ ನಿಂದ ಮಲ್ಲೇಶ್ವರಂ ಕಡೆ ಹೋದರೆ, ಅಲ್ಲಿಂದ ಚಾಮರಾಜಪೇಟೆ ಮಾರ್ಗವಾಗಿ ಬರಬಹುದು ಎಂದು ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಪಾದಯಾತ್ರೆ ವ್ಯಕ್ತಿ ಪ್ರತಿಷ್ಠೆಗಾಗಿಯೂ ಅಲ್ಲ, ಕಾಂಗ್ರೆಸ್‌ ಪ್ರತಿಷ್ಠೆಗಾಗಿಯೂ ಅಲ್ಲ, ಇದು ಜನರ ಹಿತ ಕುಡಿಯುವ ನೀರಿನ ದೃಷ್ಟಿಯಿಂದ ಮಾಡುತ್ತಿದ್ದೇವೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next