Advertisement

ಗಂಗಾವತಿ : ಮರಂ ಅಕ್ರಮ ಸಾಗಾಣಿಕೆ; ಮೂರು ಟಿಪ್ಪರ್ ವಶಕ್ಕೆ

06:36 PM Jun 09, 2021 | Team Udayavani |

ಗಂಗಾವತಿ: ಮರಂ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್ ಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಬುಧವಾರ ಮಧ್ಯಾನ್ಹ ಜರುಗಿದೆ.

Advertisement

ರಸ್ತೆ ನಿರ್ಮಾಣ ಕಾರ್ಯಕ್ಕೆ ಹಣವಾಳ ಗಾಂಧಿನಗರದ ಬಳಿಯ ಸರಕಾರಿ ಜಾಗದಲ್ಲಿ ಗಣಿಭೂವಿಜ್ಞಾನ ಇಲಾಖೆಯ ಪರವಾನಿಗೆ ಇಲ್ಲದೇ ಸರಕಾರಕ್ಕೆ ರಾಯಲ್ಟಿ ಪಾವತಿಸದೇ ಇದುವರೆಗೂ ಲಕ್ಷಾಂತರ ಮೌಲ್ಯದ ಮರಂ ಮಣ್ಣಿನ್ನು ಹಣವಾಳ ಗ್ರಾಮದಿಂದ ಹೊಸಳ್ಳಿ ಗ್ರಾಮದ ವರೆಗೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಗುತ್ತಿಗೆದಾರರು ಸಾಗಾಣಿಕೆ ಮಾಡಿರುವ ಆಪಾದನೆ ಇದ್ದು ಜಂಗಮರಕಲ್ಗುಡಿ ಗ್ರಾಮದಲ್ಲಿ ನಡೆದಿರುವ ಕಾಮಗಾರಿ ಮೂರು ಟಿಪ್ಪರ್ ಗಳಲ್ಲಿ ಮರಂ‌ ಮಣ್ಣನ್ನು ಅಕ್ರಮವಾಗಿ ಸಾಗಿಸುವ ಕುರಿತು‌ ಮಾಹಿತಿ ಹಿನ್ನೆಲೆಯಲ್ಲಿ ಉಪ ತಹಸೀಲ್ದಾರ್ ಮಹೆಬೂಬ‌ ಅಲಿ ಹಾಗೂ ಕಂದಾಯ‌ ನಿರೀಕ್ಷಕ ಹನುಮಂತಪ್ಪ ಜಂಗಮರಕಲ್ಗುಡಿ ಗ್ರಾಮಕ್ಕೆ ತೆರಳಿ ಮರಂ ಸಾಗಾಣಿಕೆ ಪರವಾನಿಗೆ ಹಾಗೂ ರಾಯಲ್ಟಿ ಪಾವತಿ ರಸೀದಿ ಕೇಳಿದಾಗ ಮರಂ ಸಾಗಾಣಿಕೆ ಮಾಡುವವರು ಪರವಾನಿಗೆ ಇಲ್ಲದಿರುವ ಕುರಿತು ಮಾಹಿತಿ ನೀಡಿದ್ದಾರೆ.

ಮೇಲಾಧಿಕಾರಿಗಳ ಆದೇಶ ಮೇರೆಗೆ ಮೂರು ಟಿಪ್ಪರ್ ಮರಂ ಮಣ್ಣಿಗೆ ಸುಮಾರು1.50 ಲಕ್ಷ ರೂ.ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ದಂಡ‌ ಪಾವತಿಸದಿದ್ದರೆ ಮೂರು ಟಿಪ್ಪರ್ ಗಳನ್ನು ಗಣಿಭೂವಿಜ್ಞಾನಿಗಳ ಮೂಲಕ‌ ಪೋಲಿಸ್ ಕೇಸ್ ಮಾಡಲಾಗುತ್ತದೆ ಎಂದು ಕಂದಾಯ ನಿರೀಕ್ಷಕ ಹನುಮಂತಪ್ಪ ಉದಯವಾಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next