Advertisement

ಭಾರತ ಟೇಬಲ್‌ ಟೆನಿಸ್‌ ತಂಡದ ಕೋಚ್‌ ರಾಯ್‌ ವಿರುದ್ಧ ಮಣಿಕಾ ಬಾತ್ರಾ ಫಿಕ್ಸಿಂಗ್‌ ಆರೋಪ!

10:50 PM Sep 03, 2021 | Team Udayavani |

ಹೊಸದಿಲ್ಲಿ : ಭಾರತ ಟೇಬಲ್‌ ಟೆನಿಸ್‌ ತಂಡದ ಕೋಚ್‌ ಸೌಮ್ಯದೀಪ್‌ ರಾಯ್‌ ವಿರುದ್ಧ ಮಣಿಕಾ ಬಾತ್ರಾ ಮ್ಯಾಚ್‌ಫಿಕ್ಸಿಂಗ್‌ ಆರೋಪ ಮಾಡಿದ್ದಾರೆ.

Advertisement

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಣಿಕಾ, ಕೋಚ್‌ ಸೌಮ್ಯದೀಪ್‌ ನೆರವು ಪಡೆಯಲು ನಿರಾಕರಿಸಿದ್ದರು. ಇದಕ್ಕೆ ಕಾರಣ ಕೇಳಿ ಭಾರತ ಟಿಟಿ ಒಕ್ಕೂಟ ನೀಡಿದ ನೋಟಿಸ್‌ಗೆ ಮಣಿಕಾ ಉತ್ತರಿಸಿದ್ದಾರೆ. ಅಲ್ಲದೇ ತಾನು ರಾಷ್ಟ್ರೀಯ ಕೋಚ್‌ ನೆರವು ಪಡೆಯದೇ ಕ್ರೀಡೆಗೆ ಅವಮಾನಿಸಿದ್ದೇನೆಂಬ ಆರೋಪವನ್ನೂ ತಿರಸ್ಕರಿಸಿದ್ದಾರೆ.

ಮಾರ್ಚ್‌ನಲ್ಲಿ ನಡೆದ ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ ತನ್ನ ವಿದ್ಯಾರ್ಥಿನಿಯೊಬ್ಬರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲೆಂದು, ನೀನು ಪಂದ್ಯವನ್ನು ಸೋಲು ಎಂದು ಸೌಮ್ಯದೀಪ್‌ ಒತ್ತಾಯಿಸಿದ್ದರು. ಹೀಗಾಗಿ ಇಂಥ ವ್ಯಕ್ತಿಯ ನೆರವು ಪಡೆಯಲು ತನಗೆ ಇಷ್ಟವಾಗಲಿಲ್ಲ ಎಂದು ಮಣಿಕಾ ವಿವರಿಸಿದ್ದಾರೆ. ಆದರೆ ಈ ಆರೋಪಗಳ ಬಗ್ಗೆ ರಾಯ್‌ ಯಾವುದೇ ಉತ್ತರ ನೀಡಿಲ್ಲ.

ಇದನ್ನೂ ಓದಿ :ಪ್ಯಾರಾಲಿಂಪಿಕ್ಸ್‌ : ಮೊದಲ ಆರ್ಚರಿ ಪದಕ ತಂದ ಹರ್ವಿಂದರ್‌ ಸಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next