Advertisement

Mangaluru ಹಾರ್ಲಿಕ್ಸ್‌, ತಲೆದಿಂಬಿನ ಕವರ್‌ನಲ್ಲಿ ಚಿನ್ನ ಸಾಗಾಟ!

02:04 AM Feb 01, 2024 | Team Udayavani |

ಮಂಗಳೂರು: ದುಬಾೖ ಯಿಂದ ಮಂಗಳೂರಿಗೆ ಆಗಮಿಸಿದ ವ್ಯಕ್ತಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಕಸ್ಟಂಸ್‌ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

Advertisement

ಏರ್‌ ಇಂಡಿಯಾ ವಿಮಾನದಲ್ಲಿ ಕಾಸರಗೋಡು ಮೂಲದ ವ್ಯಕ್ತಿ ಯೋರ್ವ ಚಿನ್ನ ಸಾಗಾಟ ಮಾಡುತ್ತಿದ್ದ ಮಾಹಿತಿ ಲಭಿಸಿದ ಮೇರೆಗೆ ಆತನನ್ನು ತಪಾಸಣೆ ಮಾಡಿದಾಗ 179 ಗ್ರಾಂ ತೂಕದ 11,16,960 ರೂ. ಮೌಲ್ಯದ ಚಿನ್ನ ಪತ್ತೆಯಾಗಿದ್ದು, ವಶಕ್ಕೆ ತೆಗೆದುಕೊಳ್ಳಲಾಗಿದೆ.

ಚಿನ್ನವನ್ನು ಪೇಸ್ಟ್‌ ರೂಪಕ್ಕೆ ಬದಲಾಯಿಸಿ,ಬೆಡ್‌ಶೀಟ್‌, ತಲೆದಿಂಬು ಕವರ್‌, ಅಲ್ಲದೆ ಸ್ವಲ್ಪ ಪುಡಿಯ ರೂಪದಲ್ಲಿ ಹಾರ್ಲಿಕ್ಸ್‌ ಬಾಟಲಿಯೊಳಗೆ ಹುದುಗಿಸಿ ತರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next