Advertisement

ಕಣ್ಮನ ಸೆಳೆದ ಅಂಧರ ಮಲ್ಲಗಂಬ-ಯೋಗ

11:42 AM Nov 12, 2018 | |

ಕಲಬುರಗಿ: ಕಣ್ಣಿದ್ದವರನ್ನು ನಾಚಿಸುವಂತೆ ಗದಗ ಜಿಲ್ಲೆಯ ಹೊಳೆ ಆಲೂರಿನ ಜ್ಞಾನಸಿಂಧು ವಸತಿ ಶಾಲೆ ಅಂಧ ವಿದ್ಯಾರ್ಥಿಗಳು ಇಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ವಸತಿ (ಎಸ್‌ಬಿಆರ್‌) ಶಾಲೆಯ ಸುವರ್ಣ ಮಹೋತ್ಸವ, ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವದ ಮೂರನೇ ದಿನವಾದ ರವಿವಾರ ಸಂಜೆ ನಿರೂಪಿಸಿದ ಮಲ್ಲಗಂಬ ಹಾಗೂ ಯೋಗ ಕಣ್ಮನ ಸೆಳೆಯಿತು. ಅಂಧ ಬಾಲಕ ಮಣಿಕಂಠ ಮಾಡಿದ ಆಂಗ್ಲ ಭಾಷೆಯಲ್ಲಿನ ಭಾಷಣ ಎಲ್ಲರ ಗಮನ ಸೆಳೆಯಿತು. ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಾಲಕರು ಕ್ರಮಾನುಸಾರ ಹಾಗೂ ಇಸ್ವಿಗಳನ್ನು ಪಟಪಟನೇ ಹೇಳಿದರು. ಜ್ಞಾನಸಿಂಧು ವಸತಿ ಶಾಲೆ ಸ್ಥಾಪಕರಾದ ತುಳಜಮ್ಮ ಕೆಲ್ಲೂರ, ಶಿವಾನಂದ ಕೆಲ್ಲೂರ ಅವರ ನಿಸ್ವಾರ್ಥ ಹಾಗೂ ಮಾದರಿ ಸೇವೆ ಶ್ಲಾಘಿ ಸಲಾಯಿತು. ಶಿವಾನಂದ ಕೆಲ್ಲೂರ ಹಾಗೂ ಅಂಧ ಬಾಲಕರನ್ನು ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next