Advertisement

ದತ್ತು ಪಡೆದ ಗ್ರಾಮಗಳ ಜನರಿಗೆ ಉಚಿತ ಲಸಿಕೆ ಕಲ್ಪಿಸಿದ ನಟ ಮಹೇಶ್ ಬಾಬು

12:20 PM May 17, 2021 | Team Udayavani |

ಹೈದರಾಬಾದ್ : ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತಾವು ದತ್ತು ಪಡೆದಿರುವ ಎರಡು ಹಳ್ಳಿಗಳ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ವ್ಯವಸ್ಥೆ ಮಾಡಿದ್ದಾರೆ.

Advertisement

ತಮ್ಮ ‘ಶ್ರೀಮಂತಡು’ ಸಿನಿಮಾ ಬಿಡುಗಡೆಯ ನಂತರ ಆಂಧ್ರ ಪ್ರದೇಶದ ಬರಿಪಲೇಮ್ ಹಾಗೂ ಸಿದ್ದಪುರಂ ಎಂಬ ಎರಡು ಹಳ್ಳಿಗಳನ್ನು ಮಹೇಶ್ ಬಾಬು ಅವರು ದತ್ತು ಪಡೆದರು. ಅಂದಿನಿಂದ ಈ ಗ್ರಾಮಗಳ ಅಭಿವೃದ್ಧಿಯ ಹರಿಕಾರ ಆಗಿರುವ ಅವರು, ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಣ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಇದೀಗ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಹಳ್ಳಿಗಳ ಜನರ ನೆರವಿಗೆ ಧಾವಿಸಿದ್ದಾರೆ.

ಬರಿಪಲೇಮ್ ಹಾಗೂ ಸಿದ್ದಪುರಂ ಗ್ರಾಮಗಳ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಿಸಿದ್ದಾರೆ ಮಹೇಶ್ ಬಾಬು. ಈ ಮೂಲಕ ಈ ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ.

ಇನ್ನು ಮಹೇಶ್ ಬಾಬು ಅವರು ಕೋವಿಡ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಭಾರತ ಸರ್ಕಾರವು 18 ವಯೋಮಾನದ ಮೇಲಿನವರು ಲಸಿಕೆ ಪಡೆಯಲು ಅವಕಾಶ ನೀಡಿರುವುದನ್ನು ಸ್ವಾಗತಿಸಿದ ಮಹೇಶ್ ಬಾಬು, ಎಲ್ಲರೂ ತಪ್ಪದೆ ಲಸಿಕೆ ಪಡೆಯುವಂತೆ ತಮ್ಮ ಅಭಿಮಾನಿಗಳಿಗೆ ಹಾಗೂ ಜನರಿಗೆ ತಿಳಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next