Advertisement

ಚುನಾವಣೆ ಫ‌ಲಿತಾಂಶ ವಾದ-ವಿವಾದ: ಮಹಾರಾಷ್ಟ್ರ BJP ಕಾರ್ಯಕರ್ತನ ಕೊಲೆ

09:44 AM May 26, 2019 | Team Udayavani |

ಮುಂಬಯಿ : ಈಚೆಗೆ ಮುಗಿದಿರುವ ಲೋಕಸಭಾ ಚುನಾವಣೆಯ ಫ‌ಲಿತಾಂಶದ ಬಗ್ಗೆ ವಾದ-ವಿವಾದ ನಡೆಯುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನನ್ನು ಜನರ ಗುಂಪೊಂದು ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.

Advertisement

ಅಕೋಲಾ ಜಿಲ್ಲೆಯ ಮೊಹಲ್ಲಾ ಗ್ರಾಮದಲ್ಲಿ ಶುಕ್ರವಾರ ಸಂಜೆ ಬಿಜೆಪಿಯ ಅಲ್ಪ ಸಂಖ್ಯಾಕ ದಳದ ಕಾರ್ಯಕರ್ತ ಮತೀನ್‌ ಪಟೇಲ್‌ ಅವರು ತನ್ನದೇ ಸಮುದಾಯದ, ಆದರೆ ಎದುರಾಳಿ ರಾಜಕೀಯ ಪಕ್ಷಕ್ಕೆ ಸೇರಿದ ಗುಂಪಿನ ಜತೆಗೆ ಚುನಾವಣಾ ಫ‌ಲಿತಾಂಶದ ಬಗ್ಗೆ ವಾದಿಸುತ್ತಿದ್ದಾಗ ಸಮೂಹದ ಸುಮಾರು 8ರಿಂದ 10 ಮಂದಿ ಆತನನ್ನು ಹೊಡೆದು ಕೊಂದರೆಂದು ಪೊಲೀಸರು ತಿಳಿಸಿದರು.

ಮತೀನ್‌ ಪಟೇಲ್‌ ಅವರ 55ರ ಹರೆಯದ ಸಹೋದರನ ಮೇಲೂ ಈ ಗುಂಪು ಹಲ್ಲೆ ನಡೆಸಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next