Advertisement

ಮಾಧವತ್ವದೆಡೆಗೆ ಸಾಗಿದರೆ ಬದುಕು ಸಾರ್ಥಕ: ಗುರುಪುರ ಶ್ರೀ

02:31 PM Mar 17, 2017 | |

 ಮೀಯಪದವು: ಸುಣ್ಣಾರ ಬಾಳಿಯೂರು ಶ್ರೀ ಕೊರಗ ತನಿಯ ಗುಳಿಗ ದೈವಸ್ಥಾನದ  ಪುನರ್‌ ಪ್ರತಿಷ್ಠಾ ಸಾನ್ನಿಧ್ಯ ಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವ ಚನವಿತ್ತು, ಕೊರಗಜ್ಜನಿಗೆ ಕಟ್ಟುಪಾಡುಗಳಿಲ್ಲ. ಹಿರಿಯರು ಹಾಕಿಕೊಟ್ಟ ತಳಪಾಯವನ್ನು ಉಳಿಸಿ ಬೆಳೆಸುವುದು ಯುವಕರಿಂದಾಗಬೇಕು. ಹಿರಿಯರು ನಡೆಸಿಕೊಂಡು ಬಂದ ಸಂಸ್ಕಾರವನ್ನು ಬೆಳೆಸುವ ಶಕ್ತಿ ಈ ಆಧುನಿಕ ಯುಗದಲ್ಲಾಗಬೇಕು. ಮನುಷ್ಯತ್ವದಿಂದ ಮಾಧವತ್ವದೆಡೆಗೆ ಸಾಗಿದರೆ ಬದುಕು ಸಾರ್ಥಕವೆನಿಸುವುದು. ಕೊರಗಜ್ಜನನ್ನು ಧರ್ಮಶ್ರದ್ಧೆಯಿಂದ ಆರಾಧಿಸಿದಾಗ ಧರ್ಮ ನೆಲೆಯೂರಲು ಸಾಧ್ಯವೆಂದು ಆಶೀರ್ವಚಿಸಿದರು.

Advertisement

ಬಾಳಿಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಂಚಾಲಕ ಡಾ|ಜಯಪ್ರಕಾಶ್‌ ನಾರಾಯಣ ತೊಟ್ಟೆತ್ತೋಡಿ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ನ್ಯಾಯವಾದಿ ರವಿ ಪ್ರಸನ್ನ ಪದಂಗಡಿ, ಮುತ್ತು ಶೆಟ್ಟಿ ಬಾಳಿಯೂರು, ಬ್ಲಾಕ್‌ ಪಂಚಾಯತ್‌ ಸದಸ್ಯೆ ಆಶಾಲತ, ವಾರ್ಡ್‌ ಸದಸ್ಯೆ ಚಂದ್ರಾವತಿ ವಿ.ಪಿ ಕುಳೂರು, ವಾರ್ಡ್‌ ಸದಸ್ಯ ಮುಹಮ್ಮದ್‌ ಕುಂಞ, ಹರೀಶ್‌ ಕುಮಾರ್‌ ಮಂಗಲ್ಪಾಡಿ ಅತಿಥಿಗಳಾಗಿ ಹಾಗೂ ವಿಶೇಷ ಆಹ್ವಾನಿತರಾಗಿ ಕಿರುತೆರೆ ನಟ ರಾಜಶೇಖರ ಶೆಟ್ಟಿ ಅಳಿಕೆ ಪಾಲ್ಗೊಂಡಿದ್ದರು.

ಈ ಶುಭ ಸಂದರ್ಭದಲ್ಲಿ ಕೃಷ್ಣ ಜಿ. ಮಂಜೇಶ್ವರ, ಜಗನ್ನಿವಾಸ ಶೆಟ್ಟಿ ಮಂಗಲ್ಪಾಡಿ, ಪಿಂಕಿರಾಣಿ ಮಂಗಳೂರು, ಅಶ್ರಫ್ ಬಾಳಿಯೂರು ಚಿನಾಲ,ರಾಜಶೇಖರ ಶೆಟ್ಟಿ ಅಳಿಕೆ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. 

ದಿವಾಕರ್‌ ಪ್ರತಾಪ್‌ನಗರ ಅವರು ಕಾರ್ಯಕ್ರಮ ನಿರೂಪಿಸಿದರು. ಅರವಿಂದಾಕ್ಷ ಭಂಡಾರಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತವನ್ನಿತ್ತರು. ಜಯಪ್ರಕಾಶ್‌ ಅಂಗಡಿದಾರು ವಂದಿಸಿದರು.  ಬ್ರಿಜೇಶ್‌ ಬಾಳಿಯೂರು ಪ್ರಾರ್ಥನೆ ಹಾಡಿದರು.

ಮಹಾಲಿಂಗೇಶ್ವರ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ವಾದ್ಯ ಘೋಷಗಳೊಂದಿಗೆ ಶ್ರೀ ಅರಸು ಸಂಕಲ ಜೈ ಹನುಮಾನ್‌ ವ್ಯಾಯಾಮ ಶಾಲೆ ಸಂತಡ್ಕ ಅವರ ತಾಲೀಮು ಪ್ರದರ್ಶನದೊಂದಿಗೆ ಪ್ರತಿಷ್ಠಾ ಸಾನ್ನಿಧ್ಯ ಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮಶ್ರೀ ಕರ್ಕುಳ ಬೂಡು ಶಂಕರನಾರಾಯಣ ಕಡಮಣ್ಣಾಯ  ಮತ್ತು ಯೋಗೀಶ್‌ ಕಲ್ಯಾಣತ್ತಾಯ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆದು ಅನ್ನ ಸಂತರ್ಪಣೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವಧಾರ ಫ್ರೆಂಡ್ಸ್‌ ಕ್ಲಬ್‌ ಚಿಗುರುಪಾದೆ ಇವರ ಪ್ರಾಯೋಜಕತ್ವದಲ್ಲಿ ನƒತ್ಯ ವೈಭವ ಮತ್ತು ಕೃಷ್ಣ ಜಿ.ಮಂಜೇಶ್ವರ  ಅವರ ನಿರ್ದೇಶನದಲ್ಲಿ ನಾಟಕ “ಜನನೇ ಬೇತೆ’ ಪ್ರದರ್ಶನಗೊಂಡಿತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next