Advertisement

ಮಕ್ಕಳ ಕಾಡುತ್ತಿರುವ ಶ್ವಾಸಕೋಶದ ಸೋಂಕು! ರೋಗ ಲಕ್ಷಣಗಳ ಕುರಿತು ಎಚ್ಚರಿಕೆ ವಹಿಸಿ

01:31 PM Jan 13, 2022 | Team Udayavani |

ಬೆಂಗಳೂರು: ಕೊರೊನಾ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಲಿದೆ ಎನ್ನುವ ಆತಂಕದ  ನಡುವೆ ಜಿಲ್ಲೆಯಲ್ಲಿ ಜ್ವರದ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ
ಮಕ್ಕಳಲ್ಲಿ ಶ್ವಾಸಕೋಶದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಭಾದಿಸುತ್ತಿರುವುದು ಹೆತ್ತವರಲ್ಲಿ ಆತಂಕ ಮೂಡಿಸುತ್ತಿದೆ.

Advertisement

ಹದಿನೈದು ದಿನಗಳಿಂದ ನಗರದಲ್ಲಿ 1-10 ವರ್ಷದೊಳಗಿನ ಮಕ್ಕಳು ಆರ್‌ವಿಎಸ್‌ ಸಂಬಂಧಿಸಿದ ಸೋಂಕು ಬಳಲುತ್ತಿರುವವರು ಶ್ವಾಸಕೋಶದ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ
ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ, ನೆಗಡಿಯ ರೂಪದಲ್ಲಿ ಇದು ಕಂಡು ಬರುತ್ತದೆ. ಸಾಮಾನ್ಯವಾಗಿ ಆರ್‌ವಿಎಸ್‌ ಈ ಸಮಯದಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾಯಿಲೆ ಉಲ್ಬಣಿಸಿದರೆ ವೈರಲ್‌ ನ್ಯುಮೋನಿಯಾಗೆ ತಿರುಗಲಿದೆ. ಪ್ರಸ್ತುತ ಬೆಂಗಳೂರು ನಗರಾದ್ಯಂತ ಕ್ಲಿನಿಕ್‌ ಹಾಗೂ ಆಸ್ಪತ್ರೆಗೆ ಬರುವ 10 ಮಕ್ಕಳಲ್ಲಿ 7 ಮಕ್ಕಳು ಆರ್‌ ವಿಎಸ್‌ ಸೋಂಕಿಗೆ ತುತ್ತಾಗುತ್ತಿದ್ದಾರೆ.

ನಗರದಲ್ಲಿ ಕೆಲ ಆರ್‌ಎಸ್‌ವಿ ಸಂಬಂಧಿತ ಬಹುತೇಕ ಮಕ್ಕಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಆರ್‌ಟಿಪಿಸಿಆರ್‌ ವರದಿ ನೆಗೆಟಿವ್‌ ಬಂದಿದೆ. ಆದರೂ ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಆರ್‌ಎಸ್‌ವಿನಲ್ಲಿ  ಉಸಿರಾಟ ಸಮಸ್ಯೆ ಹೆಚ್ಚಾದರೆ ಮಕ್ಕಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹೆತ್ತವರು ಸಾಕಷ್ಟು ಜಾಗರೂಕರಾಗಿಬೇಕು.

ಆರ್‌ಎಸ್‌ವಿ ಲಕ್ಷಣಗಳಿರುವ ಮಗುವಿಗೆ ಕೂಡ ಚಿಕಿತ್ಸೆ ನೀಡಲು ಮುಂದಾಗ ಬೇಕು ಎಂದು ಮಕ್ಕಳ ತಜ್ಞರು ಮಾಹಿತಿ ನೀಡುತ್ತಾರೆ.

ಏನಿದು ಆರ್‌ಎಸ್‌ವಿ?: ಒಂದು ವರ್ಷ ಪ್ರಾಯದ ಮಕ್ಕಳಿಗೆ ಹೆಚ್ಚಾಗಿ ಬಾಧಿಸುವ Respiratory Syncytial Virus (ಆರ್‌ ಎಸ್‌ವಿ) ಸೋಂಕು. ಇದು ಉಸಿರಾಟದ ತೊಂದರೆಯಂತಹ ಲಕ್ಷಣಗಳನ್ನು ಹೊಂದಿದೆ. ಶ್ವಾಸಕೋಶದಲ್ಲಿ ಸಣ್ಣ ಶ್ವಾಸನಾಳದ ಉರಿಯೂತ ಹಾಗೂ ಮಕ್ಕಳಲ್ಲಿ ನ್ಯುಮೋನಿಯಾಕ್ಕೆ ಕಾರಣವಾಗುತ್ತದೆ. ಈ ಸೋಂಕಿನಿಂದ ಕಫ‌, ಶೀತ, ನೆಗಡಿ ಮಕ್ಕಳನ್ನು ಕಾಡುತ್ತದೆ. ಆಕ್ಸಿಜನ್‌ ಸಮಸ್ಯೆ ಉಂಟಾದರೆ ಮಕ್ಕಳ ಜೀವ ಹಾನಿ ಕೂಡ ಆಗಬಹುದು.

Advertisement

ಹೇಗೆ ಹರಡುತ್ತದೆ?: ಸೋಂಕಿತ ಮಗುವಿನ ಉಸಿರಾಟದ ಹನಿಗಳು ಗಾಳಿಯ ಮೂಲಕ ಸುಲಭವಾಗಿ ಹರಡಲು ಸಾಧ್ಯವಾಗುತ್ತದೆ. ಸೋಂಕಿತ ವ್ಯಕ್ತಿಯ ಕೈಗಳನ್ನು ಮುಟ್ಟುವ ಸಮಯ ನೇರ ಸಂಪರ್ಕದ ಮೂಲಕ ವೈರಸ್‌ ಇತರರಿಗೆ ಹರಡುತ್ತದೆ.

ಎಚ್ಚರಿಕೆ ಅಗತ್ಯ: ವಾತಾವರಣದ ಕಾರಣದಿಂದ ಕಂಡು ಬರುವ ಈ ರೋಗ ಲಕ್ಷಣಗಳ ಕುರಿತು ಎಚ್ಚರಿಕೆ ವಹಿಸಬೇಕು. ಈ ರೋಗ ಬಾರದಂತೆ ತಡೆಯುವುದು ಕಷ್ಟ. ಆದರೆ ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಮಕ್ಕಳನ್ನು ಕರೆದೊಯ್ಯದಿರುವುದು, ಮಕ್ಕಳ ಜತೆಗೆ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವುದು, ಕೋವಿಡ್‌ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಪಾಡು ವುದು, ಮಾಸ್ಕ್ ಧರಿಸುವುದು, ಕಾಯಿಸಿ ಆರಿಸಿದ ನೀರು ಕುಡಿಸುವುದು, ಲಘು ಕಷಾಯ, ವೈದ್ಯರ ಸಲಹೆಯಿಂದ ಮೂಗಿನ ಡ್ರಾಫ್ ಬಳಸುವುದು ಇವೆಲ್ಲವನ್ನೂ ಮುಂಜಾಗ್ರತ ಕ್ರಮದಿಂದ
ನಿರ್ವಹಿಸಬಹುದಾಗಿದೆ. ಮಕ್ಕಳಿಗೆ ಫ್ರಿಡ್ಜ್ ನಲ್ಲಿಟ್ಟಿರುವ ಆಹಾರ, ಜಂಕ್‌ ಫ‌ುಡ್‌ ಕೊಡಬೇಡಿ. ಬಿಸಿ ನೀರು, ತಾಜಾ, ಪೌಷ್ಟಿಕಾಂಶ ಆಹಾರ ನೀಡಿ. ಶೀತ, ಕಫ‌, ಜ್ವರ ಲಕ್ಷಣಗಳಿದ್ದರೆ ಕೂಡಲೇ
ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಪ್ರಸ್ತುತ ಆಸ್ಪತ್ರೆಗೆ ಬರುತ್ತಿರುವ ಮಕ್ಕಳಲ್ಲಿ ಆರ್‌ವಿಎಸ್‌ ಪ್ರಕರಣಗಳು ವರದಿಯಾ ಗುತ್ತಿದೆ. ಮಕ್ಕಳಲ್ಲಿ ಆಯಾಸ, ಎದೆ ನೋವು, ಸೌಮ್ಯವಾದ ಶೀತ ಹಾಗೂ ಜ್ವರ, ತಲೆನೋವು, ಸೀನುವಿಕೆ ಲಕ್ಷಣ ಕಂಡು ಬರುತ್ತಿದೆ. ಈ ಲಕ್ಷಣ ಕಂಡು ಬಂದರೆ ಪೋಷಕರು ಮಕ್ಕಳನ್ನು ತಜ್ಞ ವೈದರಿಗೆ ತೋರಿಸುವ ಮೂಲಕ ಚಿಕಿತ್ಸೆ ಪಡೆದುಕೊಳ್ಳ ಬೇಕು. ಆ ಮೂಲಕ ಮುಂದಾಗುವ
ಅನಾಹುತವನ್ನು ತಪ್ಪಿಸ ಬಹುದಾಗಿದೆ.
– ಡಾ.ದಿವ್ಯಾರಾಜ್‌ ಟಿ.ಜೆ., ಮಕ್ಕಳ- ನವಜಾತ ಶಾಸ್ತ್ರ ತಜ್ಞೆ, ಸ್ಪೆಷಲಿಸ್ಟ್‌ ಆಸ್ಪತ್ರೆ ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next