Advertisement

ರಾಜಕಾರಣಿಗಳು ಕಾರ್ಯರೂಪಕ್ಕೆ ಬರುವ ಕನಸುಗಳನ್ನು ಮಾತ್ರ ತೋರಿಸಬೇಕು 

04:15 PM Jan 27, 2019 | |

ನಾಗಪುರ: ‘ರಾಜಕಾರಣಿಗಳಾದ ನಾವು ಕಾರ್ಯರೂಪಕ್ಕೆ ಬರುವಂತಹ ಕನಸುಗಳನ್ನು ಮಾತ್ರ ಜನರಿಗೆ ತೋರಿಸಬೇಕು. ಭರವಸೆಗಳನ್ನು ನೀಡಿ ಈಡೇರಿಸದಿದ್ದರೆ ಜನರು ಪೆಟ್ಟನ್ನೂ ನೀಡುತ್ತಾರೆ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ನೀಡಿರುವ ಹೇಳಿಕೆ ಭಾರೀ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. 

Advertisement

ನಾಗಪುರದಲ್ಲಿ  ನಟಿ ಇಷಾ ಕೊಪ್ಪಿಕರ್‌ ಅವರನ್ನು ಬಿಜೆಪಿಗೆ ಬರ ಮಾಡಿಕೊಂಡು ಮಾತನಾಡಿದ ಗಡ್ಕರಿ ರಾಜಕಾರಣಿಗಳು ಆಶ್ವಾಸನೆಗಳನ್ನು ನೀಡಿ ಈಡೇರಿಸದೆ ಹೋದಾಗ ಜನರು ಪೆಟ್ಟನ್ನೂ ಕೊಡುತ್ತಾರೆ. ನಾನು ಭರವಸೆ ನೀಡುವ ರಾಜಕಾರಣಿ ಅಲ್ಲ. ಏನು ಹೇಳುತ್ತೇನೆ ಅದನ್ನು ನೂರು ಶೇಕಡಾ ಈಡೇರಿಸುತ್ತೇನೆ ಎಂದರು.

ಇದೇ ವೇಳೆ  ಕೆಲ ಬಿಜೆಪಿ ನಾಯಕರು  ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಸ್ವಲ್ಪ ನಿಯಂತ್ರಣದಲ್ಲಿರಬೇಕು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next