Advertisement

Kundapura ಸಮುದ್ರ ಪಾಲಾಗಿ ಕಳೆಯಿತು 5 ದಿನ; ಹುಡುಕಾಟವೇ ಸವಾಲು

12:08 AM Jun 25, 2024 | Team Udayavani |

ಕುಂದಾಪುರ: ಬೀಜಾಡಿ ಬೀಚ್‌ನಲ್ಲಿ ವಿಹಾರಕ್ಕೆಂದು ತೆರಳಿದ್ದ ವೇಳೆ ಸಮುದ್ರ ಪಾಲಾಗಿದ್ದ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಟಿ.ಆರ್‌. ಯೋಗೀಶ್‌ (23) ನಾಪತ್ತೆಯಾಗಿ, 5 ದಿನ ಕಳೆದರೂ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಹುಡುಕಾಟವನ್ನು ಪೊಲೀಸರು ಮುಂದುವರಿಸಿದ್ದಾರೆ.

Advertisement

ಕಡಲ ಅಲೆಗಳ ಅಬ್ಬರ ಭಾರೀ ಪ್ರಮಾಣದಲ್ಲಿ ಇರುವುದರಿಂದ ಬೋಟು, ದೋಣಿಗಳನ್ನು ಸಮುದ್ರಕ್ಕೆ ಇಳಿಸಿ, ಹುಡುಕಾಟ ನಡೆಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗಾಳಿಯ ತೀವ್ರತೆ ಭಾರೀ ಪ್ರಮಾಣದಲ್ಲಿ ಇರುವುದರಿಂದ ಬೋಟುಗಳಲ್ಲಿ ಕಾರ್ಯಾಚರಣೆ ನಡೆಸುವುದು ಅಪಾಯಕಾರಿಯೆನಿಸಿದೆ.

ಹುಡುಕಾಟಕ್ಕೆ ಸಣ್ಣ ದೋಣಿ
ಹುಡುಗನ ಬಗ್ಗೆ ಸುಳಿವು ಸಿಕ್ಕಲ್ಲಿ ತಿಳಿಸಲು ಸ್ಥಳೀಯ ನಿವಾಸಿಗರಿಗೆ ಸೂಚಿಸಲಾಗಿದೆ. ಸಣ್ಣ ದೋಣಿ ಮೂಲಕ ಗಂಗೊಳ್ಳಿಯಿಂದ ಕೋಡಿ, ಬೀಜಾಡಿಯವರೆಗೆ ಹುಡುಕಾಟ ನಡೆಸಲಾಗಿದೆ. ತ್ರಾಸಿಯಲ್ಲಿ ಸ್ಥಳೀಯ ಮೀನುಗಾರರು ಮೃತದೇಹವೊಂದನ್ನು ನೋಡಿದ್ದಾಗಿ ತಿಳಿಸಿದ್ದು, ಅಲ್ಲಿಗೆ ಬೋಟು ಮೂಲಕ ತೆರಳಿ ಹುಡುಕುವ ಪ್ರಯತ್ನ ನಡೆಸಿದರೂ, ಮತ್ತೆ ಆ ಮೃತದೇಹ ಸಿಕ್ಕಿಲ್ಲ. ರವಿವಾರ ಕುಂದಾಪುರದ ಅಗ್ನಿಶಾಮಕ ದಳದಿಂದ ಹುಡುಕಾಟದ ಪ್ರಯತ್ನ ನಡೆಯಿತು. ಸೋಮವಾರ ಕುಂದಾಪುರ ಪೊಲೀಸರ ತಂಡವು ಭಟ್ಕಳಕ್ಕೆ ತೆರಳಿ ಅಲ್ಲಿ ಹುಡುಕಾಟ ನಡೆಸಿತು.

 

Advertisement

Udayavani is now on Telegram. Click here to join our channel and stay updated with the latest news.

Next