Advertisement

Kundapura ಆನಗಳ್ಳಿ: ಹೊಳೆಗೆ ಬಿದ್ದು ವ್ಯಕ್ತಿ ಸಾವು

12:37 AM Jun 24, 2024 | Team Udayavani |

ಕುಂದಾಪುರ: ಬೆಂಗಳೂರಿನಿಂದ ಊರಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟು ಬಂದಿದ್ದ ಬಡಾಕೇರಿ ಗ್ರಾಮದ ಸಾತುಬೆಟ್ಟು ನಿವಾಸಿ ರಾಜು ಬಿ. (48) ಅವರ ಮೃತದೇಹ ಜೂ.21 ರಂದು ಆನಗಳ್ಳಿ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ.

Advertisement

ರಾಜು ಅವರು ಬೆಂಗಳೂರಿನಲ್ಲಿ ಕ್ಯಾಟರಿಂಗ್‌ ಕೆಲಸ ಮಾಡಿಕೊಂಡಿದ್ದು, ಜೂ. 20ರಂದು ಊರಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟಿದ್ದರು. ಜೂ. 21ರಂದು ಮಧ್ಯಾಹ್ನ ಆನಗಳ್ಳಿ ಹೊಳೆಯಲ್ಲಿ ಗಂಡಸಿನ ಮೃತದೇಹ ಸಿಕ್ಕಿರುವ ವಿಚಾರ ತಿಳಿದು ಸಹೋದರ ಅಶೋಕ (38) ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಅದು ರಾಜು ಅವರದೇ ಮೃತದೇಹವೆಂದು ಗುರುತು ಪತ್ತೆ ಹಚ್ಚಿದ್ದಾರೆ.

ರಾಜು ಅವರು ಯಾವುದೋ ಕಾರಣಕ್ಕೆ ಆನಗಳ್ಳಿಯ ನದಿಯ ಸಮೀಪಕ್ಕೆ ಹೋದವರು ಆಕಸ್ಮಿಕವಾಗಿಹೊಳೆ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರಬಹುದು ಎಂದು ತಿಳಿದು ಬಂದಿದೆ. ಸಹೋದರ ಅಶೋಕ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಢಿಕ್ಕಿ ; ಸಹ ಸವಾರನಿಗೆ ಗಾಯ
ಗಂಗೊಳ್ಳಿ: ಗುಜ್ಜಾಡಿಯ ನಾಗೇಂದ್ರ ಅವರ ಬೈಕ್‌ಗೆ ವಾಸ್ಟನ್‌ ಡಯಾಸ್‌ ಅವರ ಬೈಕ್‌ ಢಿಕ್ಕಿಯಾದ ಪರಿಣಾಮ ಸಹ ಸವಾರ ಶ್ರೀನಿವಾಸ ಗಾಯಗೊಂಡ ಘಟನೆ ಜೂ. 22ರಂದು ಸಂಭವಿಸಿದೆ. ನಾಗೇಂದ್ರ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next