Advertisement

Kundapura ಬಸ್ಸಿನಲ್ಲಿಯೇ ಕುಸಿದು ಬಿದ್ದು ವ್ಯಕ್ತಿ ಸಾವು

12:12 AM Jun 13, 2024 | Team Udayavani |

ಕುಂದಾಪುರ: ಬಸ್ಸಿನಲ್ಲಿಯೇ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜೂ. 9ರಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ನಾಡ ಗ್ರಾಮದ ಪಡುಕೋಣೆಯ ನಿವಾಸಿ ನಾಗೇಶ ಮಡಿವಾಳ (40) ಸಾವನ್ನಪ್ಪಿದ ವ್ಯಕ್ತಿ.
ಇವರು ಜೂ. 9ರಂದು ಕುಟುಂಬದವರೊಡನೆ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ, ಮರಳಿ ಬರುವ ವೇಳೆ ಕಡಬ ಸಮೀಪ ಸಂಚರಿಸುವಾಗ ಬಸ್ಸಿನಲ್ಲಿಯೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಕಡಬ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರೊಳಗೆ ಮೃತಪಟ್ಟಿದ್ದರು.

ನಾಗೇಶ್‌ ಅವರು ಉಡುಪಿಯಲ್ಲಿ ಕೊರಿಯರ್‌ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next