Advertisement

Kundapura ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

08:14 PM Jun 05, 2024 | Team Udayavani |

ಕುಂದಾಪುರ: ಕಳೆದ 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ದಿನೇಶ್‌ ಮೊಗವೀರನನ್ನು ಬಂಧಿಸಿದ ಕೋಟ ಪೊಲೀಸರು ಇಲ್ಲಿನ ನ್ಯಾಯಾಲಯದಕ್ಕೆ ಹಾಜರುಪಡಿಸಿದ್ದಾರೆ.

Advertisement

ಕೋಟ ಮತ್ತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೋಕ್ಸೋ ಪ್ರಕರಣ ಕೂಡ ಇದೆ. ಈತನನ್ನು ಬಿದ್ಕಲ್‌ ಕಟ್ಟೆ ಬಸ್‌ ನಿಲ್ದಾಣ ಸಮೀಪ ಬಂಧಿಸಿದ್ದಾರೆ.

ಕೋಟ ಠಾಣಾಧಿಕಾರಿ ತೇಜಸ್ವಿ ಮಾರ್ಗದರ್ಶನದಲ್ಲಿ ಸಿಬಂದಿಗಳಾದ ಹೆಡ್‌ ಕಾನ್‌ಸ್ಟೆಬಲ್‌ ಕೃಷ್ಣ , ರಾಜೇಶ್‌, ಮಂಜುನಾಥ್‌ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿ ಐದು ಮದುವೆಯಾಗಿದ್ದು ವಂಚನೆ, ಪೋಕ್ಸೋ, ಕಳ್ಳತನ ಸೇರಿ ಹಲವು ಪ್ರಕರಣ ದಾಖಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next