Advertisement

Kundapura ಪ್ಲಾಸ್ಟಿಕ್‌ ಅಕ್ಕಿ ವದಂತಿಗೆ ಆಹಾರ ನಿರೀಕ್ಷಕರ ವಿವರಣೆ

11:40 PM Jun 15, 2024 | Team Udayavani |

ಕುಂದಾಪುರ: ಆಹಾರ ಇಲಾಖೆ ವ್ಯಾಪ್ತಿಯ ಅಂಪಾರು ಸಮೀಪದ ನೆಲ್ಲಿಕಟ್ಟೆಯ ನ್ಯಾಯಬೆಲೆ ಅಂಗಡಿಗೆ ಪ್ಲಾಸ್ಟಿಕ್‌ ಅಕ್ಕಿ ಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಆಡಿಯೋ ಹಾಗೂ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ತಾಲೂಕು ಆಹಾರ ನಿರೀಕ್ಷಕರು, “ಅದು ಸಾರವರ್ಧಿತ ಅಕ್ಕಿ’ ಎಂದು ಹೇಳುವ ಮೂಲಕ ವದಂತಿಗೆ ವಿವರಣೆ ನೀಡಿ ಸ್ಪಷ್ಟಪಡಿಸಿದ್ದಾರೆ.

Advertisement

ಆಹಾರ ನಿರೀಕ್ಷಕ ಎಚ್‌.ಎಸ್‌. ಸುರೇಶ್‌ ಅವರು ಶನಿವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿ ನೀಡಲಾದ ಪಡಿತರ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿ (ಪೋರ್ಟಿಪೈಡ್‌ ರೈಸ್‌) ಮಿಶ್ರಿತವಾಗಿರುತ್ತದೆ ಎಂದು ಆಹಾರ ಇಲಾಖೆ ಈಗಾಗಲೇ ತಿಳಿಸಿದೆ.

ಆದ್ದರಿಂದ ಪಡಿತರ ಚೀಟಿದಾರರು ಆತಂಕಪಡುವುದು ಬೇಡ, ತಪ್ಪು ಮಾಹಿತಿ ಹಬ್ಬಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದೂ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next