Advertisement

ಕುದ್ಮಾರು: ಕಾಂಗ್ರೆಸ್‌ ಮತಯಾಚನೆ 

04:25 PM May 09, 2018 | Team Udayavani |

ಬೆಳಂದೂರು: ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ| ರಘು ಅವರ ಪರ ಕುದ್ಮಾರು, ಪಟ್ಟೆ, ಬೆಳಂದೂರು, ಪುಚ್ಚೆತ್ತೋಡಿ ಮೊದಲಾದೆಡೆ ಮತ ಯಾಚಿಸಲಾಯಿತು.

Advertisement

ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಪ್ರವೀಣ್‌ ಕುಮಾರ್‌ ಕೆಡೆಂಜಿಗುತ್ತು ಮಾತನಾಡಿ, ಕಾಂಗ್ರೆಸ್‌ ಯಾವತ್ತೂ ಅಭಿವೃದ್ಧಿ ಪರ ಚಿಂತನೆಯುಳ್ಳ ಪಕ್ಷ, ರಾಜಕೀಯಕ್ಕಾಗಿ ಪಕ್ಷ ಕಾರ್ಯ ನಿರ್ವಹಿಸದೆ ಜನಪರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಜಾರಿಗೊಳಿಸಿದ ಹಲವು ಕಲ್ಯಾಣ ಕಾರ್ಯಗಳು ಗೆಲುವಿಗೆ ಪೂರಕವಾಗಲಿವೆ ಎಂದರು.

ಬೆಳಂದೂರು ಗ್ರಾ.ಪಂ. ಸದಸ್ಯೆ ಗೌರಿ ಸಂಜೀವ, ಜಯಾನಂದ ಕೆಡೆಂಜಿ, ಸುಂದರ ನಡುಗುಡ್ಡೆ, ನಾರಾಯಣ ಜನತಾ ಗೃಹ, ರಝಾಕ್‌ ಜನತಾ ಗೃಹ, ಕುಶಾಲಪ್ಪ ಕೆಡೆಂಜಿ, ಮೋಹನ್‌ ಕೆಡೆಂಜಿ, ಬಾವು ಬರೆಪ್ಪಾಡಿ ಮುಂತಾದವರು ಮತಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next