Advertisement

ತಮಿಳು ನಿರ್ದೇಶಕನ ಚಿತ್ರದಲ್ಲಿ ಸುದೀಪ್‌

04:11 PM Aug 26, 2021 | Team Udayavani |

ಕಿಚ್ಚ ಸುದೀಪ್‌ ನಟನೆಯ “ಕೋಟಿಗೊಬ್ಬ-3′ ಹಾಗೂ “ವಿಕ್ರಾಂತ್‌ ರೋಣ’ ಎರಡೂ ಚಿತ್ರಗಳು ಈಗ ಬಿಡುಗಡೆಯ ಹಂತಕ್ಕೆ ಬಂದಿವೆ. ಆದರೆ, ಸುದೀಪ್‌ ಅವರ ಮುಂದಿನ ಚಿತ್ರ ಯಾವುದು, ಯಾರು ನಿರ್ದೇಶಿಸುತ್ತಾರೆ ಎಂಬ ಚರ್ಚೆ ಹಲವು ದಿನಗಳಿಂದ ನಡೆಯುತ್ತಲೇ ಇತ್ತು. ಈ ನಡುವೆಯೇ ಕೆಲವು ದಿನಗಳಿಂದ ಸೋಶಿಯಲ್‌ ಮೀಡಿಯಾಗಳಲ್ಲಿ ತಮಿಳು ನಿರ್ದೇಶಕ ವೆಂಕಟ್‌ ಪ್ರಭು ಅವರ ಹೆಸರು ಕೇಳಿಬಂದಿತ್ತು. ಆದರೆ, ಈಗ ಅದು ಅಧಿಕೃತವಾಗಿದೆ.

Advertisement

ಇದನ್ನೂ ಓದಿ:ನಾನು ಥಿಯೇಟರ್‌ ನಿಂದ ಸ್ಟಾರ್‌ ಆದವನು…ಒಟಿಟಿಯಲ್ಲಿ ರಿಲೀಸ್‌ಗೆ ಆಸಕ್ತಿ ಇಲ್ಲ

ಸುದೀಪ್‌ ಅವರ ಮುಂದಿನ ಚಿತ್ರವನ್ನು ವೆಂಕಟ್‌ ಪ್ರಭು ನಿರ್ದೇಶಿಸಲಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಬಂದು ಸುದೀಪ್‌ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್‌ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿದ್ದಾರೆ. ಈ ವಿಚಾರವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ವೆಂಕಟ್‌ ಪ್ರಭು, “ಅದ್ಭುತವಾದ ಆತಿಥ್ಯಕ್ಕೆ ಥ್ಯಾಂಕ್ಸ್‌. ನೀವು ಒಳ್ಳೆಯ ಅಡುಗೆಯವರು. ನಮ್ಮ ಮುಂದಿನ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

ಹಾಗಾದರೆ, ಸುದೀಪ್‌ ಅವರ ಹೊಸ ಚಿತ್ರ ಯಾವಾಗ ಅನೌನ್ಸ್‌ ಆಗಬಹುದು ಎಂದು ನೀವು ಕೇಳಬಹುದು. ಸೆಪ್ಟೆಂಬರ್‌ 02 ಸುದೀಪ್‌ ಹುಟ್ಟುಹಬ್ಬ. ಆ ದಿನ ಹೊಸ ಚಿತ್ರ ಅನೌನ್ಸ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next