Advertisement

ಹೊಸ ಫೋಟೋ ಶೂಟ್‌ ಹಂಚಿಕೊಂಡ ಕಿಚ್ಚ

03:07 PM Aug 21, 2021 | Team Udayavani |

ಈ ಹಿಂದಿನ ಯೋಜನೆಯಂತೆ ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇದೇ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕಿಚ್ಚ ಸುದೀಪ್‌ ಅಭಿನಯದ “ವಿಕ್ರಾಂತ್‌ ರೋಣ’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ಎರಡನೇ ಅಲೆಯ ಆತಂಕ ಲಾಕ್‌ಡೌನ್‌ನಿಂದ ಚಿತ್ರ ತಂಡದ ಪ್ಲಾನ್‌ ಅಂದುಕೊಂಡಂತೆ ನಡೆಯಲಿಲ್ಲ. ಇನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ “ವಿಕ್ರಾಂತ್‌ ರೋಣ’ ತೆರೆಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ವಿಷಯ ನಿರಾಸೆ ತಂದಿದ್ದರೂ, ಅದನ್ನು ತಣಿಸುವ ಸಲುವಾಗಿ ಸುದೀಪ್‌ ಸ್ಪೆಷಲ್‌ ಫೋಟೋವನ್ನು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶೇರ್‌ ಮಾಡಿದ್ದಾರೆ.

Advertisement

ಇದನ್ನೂ ಓದಿ:ಪುನೀತ್‌ ವರ್ಕೌಟ್ ವಿಡಿಯೋಗೆ ಫ್ಯಾನ್ಸ್‌ ಫಿದಾ

ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ತಿಳಿಸಿರುವ ಸುದೀಪ್‌, ಕೊರೊನಾ ಎರಡನೇ ಲಾಕ್‌ಡೌನ್‌ ಹಾಗೂ ಮೂರನೇ ಅಲೆಯ ಭೀತಿಯಿಂದ “ವಿಕ್ರಾಂತ್‌ ರೋಣ’ ಚಿತ್ರದ ಕೆಲಸಗಳನ್ನು ನಿಲ್ಲಿಸಲಾಗಿತ್ತು. ಇದೀಗ, ಮತ್ತೆ ಪೋಸ್ಟ್‌ ಪ್ರೊಡಕ್ಷನ್‌ಕೆಲಸಕ್ಕೆ ಚಾಲನೆಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ ಹಬ್ಬದ ಪ್ರಯುಕ್ತ, ತಮ್ಮ ಸ್ಟೈಲಿಶ್‌ ಫೋಟೋವೊಂದನ್ನು ಶೇರ್‌ ಮಾಡಿರುವ ಸುದೀಪ್‌, “ಬಹಳ ದಿನಗಳ ನಂತರ ವೈಯಕ್ತಿಕವಾಗಿ ಮಾಡಿದ ಪೋಟೋ ಶೂಟ್‌ ಇದಾಗಿದೆ’ ಎಂದು ಕ್ಯಾಪ್ಷನ್‌ ಕೂಡ ಹಾಕಿಕೊಂಡಿದ್ದಾರೆ. ಇನ್ನು ಸುದೀಪ್‌ ಶೇರ್‌ ಮಾಡಿರುವ ಈ ಪೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next