Advertisement

ಲಕ್ನೋ ವಿರುದ್ಧಸನ್‌ರೈಸರ್ ಹೈದರಾಬಾದ್‌ ಸೋಲು ; ಕಾವ್ಯಾ ಮಾರನ್‌ಗೆ ನಿರಾಶೆ

05:57 PM Apr 06, 2022 | Team Udayavani |

ಚೆನ್ನೈ: ಲಕ್ನೋ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವು ಸೋತಿರುವುದು ತಂಡದ ಸಿಇಒ ಕವಿಯಾ ಮಾರನ್‌ಗೆ ನಿರಾಶೆಯನ್ನುಂಟು ಮಾಡಿದೆ.

Advertisement

ಈ ಬಾರಿಯ ಐಪಿಎಲ್‌ನಲ್ಲಿ ಹೈದರಾಬಾದ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇದು ತಂಡದ ಸತತ ಎರಡನೇ ಸೋಲು ಆಗಿದೆ. ಪೆವಿಲಿಯನ್‌ನಲ್ಲಿ ಪಂದ್ಯ ವೀಕ್ಷಿಸಿದ ಕವಿಯಾ ಮಾರನ್‌ ಅವರ ಮುಖದಲ್ಲಿ ದುಃಖ ಕಾಣುತ್ತಿತ್ತು. ಸತತ ಎರಡನೇ ಸೋಲಿನಿಂದ ಅವರು ಬಹಳಷ್ಟು ನಿರಾಶೆ ಅನುಭವಿಸಿದರು.

ಮಾರನ್‌ ಕುಟುಂಬ ಅಕ್ರಮ ಆಸ್ತಿ ಪಡೆದಿರುವುದು ಗೊತ್ತಾದ ವೇಳೆ ತಮಿಳು ಜನರ ವರ್ತನೆಯಂತೆ ಕವಿಯಾ ಮಾರನ್‌ ಅವರಲ್ಲಿ ಕಂಡು ಬಂತು ಎಂದು ಟ್ವಿಟರ್‌ನಲ್ಲಿ ಬರೆಯಲಾಗಿದೆ.

ಅವರು ಇದಕ್ಕಿಂತ ಉತ್ತಮ ನಿರ್ವಹಣೆಯನ್ನು ಬಯಸಿದ್ದಾರೆ. ಕೇನ್‌ ವಿಲಿಯಮ್ಸನ್‌, ಅಬ್ದುಲ್‌ ಸಮದ್‌, ಅಭಿಷೇಕ್‌ ವರ್ಮ, ಉಮ್ರಾನ್‌ ಮಲಿಕ್‌,ರಾಹುಲ್‌ ತ್ರಿಪಾಠಿ, ಮಾರ್ಕ್‌ರಮ್‌.ಪ್ಲೀಸ್‌ ನೀವು ಅವರನ್ನು ಸಂತೋಷಗೊಳಿಸಲು ಪ್ರಯತ್ನಿಸಿ ಎಂದು ಟ್ವಿಟರ್‌ನಲ್ಲಿ ಇನ್ನೊಬ್ಬರು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next