Advertisement

ಕಥುವಾ ಪ್ರಕರಣ ಹೀನ ಕೃತ್ಯ: ರಾಷ್ಟ್ರಪತಿ ಕೋವಿಂದ್‌

06:00 AM Apr 19, 2018 | Team Udayavani |

ಕಾಕ್ರಿಯಾಲ್‌: “ಜಮ್ಮು-ಕಾಶ್ಮೀರದ ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಅತ್ಯಂತ ಹೀನ ಮತ್ತು ನಾಚಿಕೆಗೇಡಿನ ಕೃತ್ಯ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದ್ದಾರೆ.

Advertisement

ಕಥುವಾ ಪ್ರಕರಣವು ವಿಶ್ವಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೋವಿಂದ್‌, ನಾವು ಎಂತಹ ಸಮಾಜವನ್ನು ನಿರ್ಮಿಸುತ್ತಿದ್ದೇವೆ ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.

ಬುಧವಾರ ಇಲ್ಲಿನ ಶ್ರೀ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್‌, “ಸ್ವಾತಂತ್ರ್ಯ ಪಡೆದು 70 ವರ್ಷಗಳ ಬಳಿಕವೂ ಇಂಥ ಹೀನ ಕೃತ್ಯ ನಡೆಯುತ್ತಿರುವುದು ದುರಂತ ಮಾತ್ರವಲ್ಲ, ನಾಚಿಕೆಗೇಡಿನ ವಿಷಯ. ನಾವು ಎತ್ತ ಕಡೆ ಸಾಗುತ್ತಿದ್ದೇವೆ? ಎಂಥ ಸಮಾಜವನ್ನು ನಿರ್ಮಿಸುತ್ತಿದ್ದೇವೆ? ಎಂದು ಯೋಚಿಸಬೇಕಾದ ಸಮಯ ವಿದು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next